ಬೆಳ್ತಂಗಡಿ: ದ. ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಮಹಾಸಭೆ ಸಂಘದ ಅಧ್ಯಕ್ಷ ಬಿ. ಹರೀಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಅಳದಂಗಡಿಯ ದೀಪಾ ಸಭಾ ಭವನದಲ್ಲಿ ಜು. 21 ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅರುಣ್ ಮೊರಾಸ್ ಎಸ್. ಪಿ. ಎಸ್. ಎರೆಂಜರ್ಸ್ ಮಡಂತ್ಯಾರು, ಪ್ರಧಾನ ಕಾರ್ಯದರ್ಶಿಯಾಗಿ ಮಾತುಕುಟ್ಟಿ ಓಡಂಪಲ್ಲಿಲ್ ಎರೇಂಜರ್ಸ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಅಶ್ವಥ್ ಕುಮಾರ್ ಕೆ. ಉಳ್ಳಾಳ್ತಿ ಶಾಮಿಯಾನ ನಿಡ್ಲೆ ಆಯ್ಕೆಯಾದರು.
ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಬಿ. ಹರೀಶ್ ಕುಮಾರ್ ಜ್ಯೋತಿ ಎರೆಂಜರ್ಸ್ ಗೇರುಕಟ್ಟೆ, ಗೌರವ ಸಲಹೆಗಾರರಾಗಿ ಪ್ರಭಾಕರ ಶೆಟ್ಟಿ ದೀಪ ಎರೆಂಜರ್ಸ್ ಅಳದಂಗಡಿ, ಉಪಾಧ್ಯಕ್ಷರುಗಳಾಗಿ ಸುಕೇಶ್ ಜೈನ್ ಪದ್ಮಾಂಭ ಎರೇಂಜರ್ಸ್ ಅಳದಂಗಡಿ, ಧರ್ಮಪ್ಪ ಮೂಲ್ಯ ಭಾರತ್ ಶಾಮಿಯಾನ ನಾವೂರು, ಜೊತೆ ಕಾರ್ಯದರ್ಶಿಯಾಗಿ ರಾಜೇಂದ್ರ ಜೈನ್ ಎಸ್. ಆರ್ ಎರೇಂಜರ್ಸ್, ವೇಣೂರು, ಅದರಂತೆ ವಲಯ ಸಂಚಾಲಕರಾಗಿ ಮಡಂತ್ಯಾರು ಯಶೋಧರ ಶೆಟ್ಟಿ, ನಿಧಿ ಶಾಮಿಯಾನ ವೇಣೂರು, ಸುಶಾನ್ ಪಿಂಟೋ ಪಿಂಕಿ ಎರೆಂಜರ್ಸ್ ಬಂಗಾಡಿ, ಸಂದೇಶ್ ಶ್ರೀ ವಿನಾಯಕ ಶಾಮಿಯಾನ, ಧರ್ಮಸ್ಥಳ ಸೆಬಾಸ್ಟಿಯನ್, ಪಿಟಿ ಎಂ ಎರೇಂಜರ್ಸ್ ಅರಸಿನಮಕ್ಕಿ, ದಯಾನಂದ ಶೆಟ್ಟಿ, ಶ್ರೀ ಚಾಮುಂಡೇಶ್ವರಿ ಅರೇಂಜರ್ಸ್ ಬೆಳ್ತಂಗಡಿ. ಮನು, ಕೆ. ಸಿ ಈವೆಂಟ್ ಸುಲ್ಕೇರಿ , ಸೋಮನಾಥ್ ಶಬರಿ ಎರೇಂಜರ್ಸ್ ಕಕ್ಕಿಂಜೆ, ದೀಕ್ಷಿತ್ ಸಾಲ್ಯಾನ್ ಪ್ರಗತಿ ಶಾಮಿಯಾನ ಕಲ್ಲೇರಿ, ಬಾಲಕೃಷ್ಣ ಶೆಟ್ಟಿ, ಅಳದಂಗಡಿ ವಿಠಲ ಕುಲಾಲ್, ಉಜಿರೆ ಜಾನೆಟ್ ಪಿಂಟೋ, ಕೀರ್ತಿ ಎರೇಂಜರ್ಸ್, ಸಂಘಟನಾ ಕಾರ್ಯದರ್ಶಿ ಮನೋಹರ್ ಕುಮಾರ್ ಶ್ರೀದೇವಿ ಎರೇಂಜರ್ಸ್ ಸುಲ್ಕೇರಿಮೊಗ್ರು ಆಯ್ಕೆಯಾದರು.















