25.5 C
ಪುತ್ತೂರು, ಬೆಳ್ತಂಗಡಿ
August 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ವಿದ್ವತ್ ಪಿಯು ಕಾಲೇಜಿಗೆ ಮತ್ತೊಂದು ಗರಿ

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ನಡುವೆ ಮರು ಮೌಲ್ಯಮಾಪನದಲ್ಲಿ ಇದೀಗ ಚಿನ್ಮಯ್ ಜಿ.ಕೆ. (595) ಶೇ.99.16 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 5ನೇ ಸ್ಥಾನಕ್ಕೆ ಜಿಗಿದು ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.

ವಿಜ್ಞಾನ ವಿಭಾಗದ ಪ್ರಥಮ ಫಲಿತಾಂಶದಲ್ಲಿ ತನುಶ್ರೀ (593) ಶೇ.98.83 ಅಂಕ ಗಳಿಸಿ ರಾಜ್ಯದಲ್ಲಿ 7 ಸ್ಥಾನ ಪಡೆದಿದ್ದರು. ಈ ವೇಳೆ ಚಿನ್ಮಯ್ ಜಿ.ಕೆ. ಅವರು ಮರು ಮೌಲ್ಯಮಾಪನಕ್ಕೆ ಒಳಪಡಿಸಿದಂತೆ ಏಪ್ರಿಲ್ 29 ರಂದು ಹೊರಬಂದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ (595) ಶೇ.99.16 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ೫ ನೇ ರ‍್ಯಾಂಕ್ (ಭೌತಶಾಸ್ತ್ರ-೧೦೦, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) ಪಡೆದು ಕಾಲೇಜಿಗೆ ಕರ‍್ತಿ ತಂದಿದ್ದಾರೆ.

ತನುಶ್ರೀ (593) ಶೇ.98.83% (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100) ನಾಲ್ಕು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್ ಹಾಗೂ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಧ್ಯಾನ ಈ ಹಿಂದೆ (590) ಅಂಕ (ಕನ್ನಡ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100) ಪಡೆದಿದ್ದು ಮರು ಮೌಲ್ಯಮಾಪನ ನಡೆಸಿದಾಗ ಭಾಷಾ ವಿಷಯದಲ್ಲಿ ಹೆಚ್ಚುವರಿ 1 ಅಂಕ ಪಡೆದು (591) ಶೇ.98.50 ಅಂಕ ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್, ಕಾಲೇಜಿಗೆ ತೃತೀಯ ಸ್ಥಾನಿಯಾಗಿದ್ದಾರೆ.

ಉಳಿದಂತೆ ವಿಜ್ಞಾನ ವಿಭಾಗದಲ್ಲಿ ಈ ಹಿಂದೆ ಜಿ.ಎಸ್.ರಾಹುಲ್ (584) -ಶೇ.97.33% ಪಡೆದಿದ್ದು ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ 4 ಅಂಕಪಡೆದು (588)- ಶೇ.98, ಆಶ್ಲೇಷ್ ಜೆ.ಎಸ್. ಹೆಚ್ಚುವರಿ ೬ ಅಂಕ ಪಡೆದು (573) ಶೇ.95., ಸಮ್ಯಕ್ ತೇಜಸ್ವಿ ಹೆಚ್ಚುವರಿ 4 ಅಂಕ ಪಡೆದು (576) ಶೇ.96 ಹಾಗೂ ಮೈತಿಲಿ ಗೋರೆ, ಮೋಕ್ಷಾ, ನಿನಾದ ಎಸ್.ಎ., ಪ್ರಣವ್ ದೇವ್, ವೆನಿಕಾ ಬಿ.ವೈ., ವಿಕಾಸ್ ಜಿ.ಎನ್., ಯಶಸ್ವಿ ಆರ್.ಸಾಲ್ಯಾನ್, ಯಶಸ್ವಿನಿ ಜಯೇಂದ್ರ ಬಂಗೇರ ಹೆಚ್ಚುವರಿ ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನೇಹಾ ಭಟ್ ಈ ಹಿಂದೆ ೫೭೩ ಅಂಕ ಪಡೆದಿದ್ದು ಹೆಚ್ಚುವರಿ 11 ಅಂಕ ಪಡೆದು (584) ಶೇ.97.33, ಒಟ್ಟು 17 ಮಂದಿ ವಿದ್ಯರ‍್ಥಿಗಳು ಮರು ಮೌಲ್ಯಮಾಪನಕ್ಕಾಗಿ ಪ್ರಯತ್ನಿಸಿದ್ದು ಈ ಪೈಕಿ ಬಹುತೇಕ ಮಂದಿ ಅತ್ಯುತ್ತಮ ಅಂಕದೊಂದಿಗೆ ಕಾಲೇಜಿಗೆ ಮತ್ತೊಂದುವ ಗರಿ ತಂದಿದ್ದಾರೆ. ಈ ಫಲಿತಾಂಶದಿಂದ ಕಾಲೇಜಿನ ಶೈಕ್ಷಣಿಕ ಮಂಡಳಿಯನ್ನು ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕರ‍್ಯರ‍್ಶಿ ಪ್ರಜ್ವಲ್ ರೈ, ಖಜಾಂಚಿ ಎಂ.ಕೆ.ಕಾಶಿನಾಥ್., ಶೈಕ್ಷಣಿಕ ನರ‍್ದೇಶಕ ಗಂಗಾಧರ್ ಇ.ಮಂಡಳಲೆ ಪ್ರಶಂಸಿದ್ದಾರೆ.

Related posts

ದಿ| ಪದ್ಮನಾಭ ಆಚಾರ್ಯರ ಕುಟುಂಬಕ್ಕೆ ಸ್ನೇಹಿತರ ನೆರವು: ಶ್ರಮದಾನದ ಮೂಲಕ ಮನೆ ದುರಸ್ತಿ

Suddi Udaya

ಆ.19: ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ಸಮಾರಂಭ

Suddi Udaya

ಭಾರೀ ಮಳೆ: ಕಾಯರ್ತಡ್ಕ – ಪುತ್ಯೆ ಸೇತುವೆ ಮೂಲಕ ಸಂಚಾರ ಸ್ಥಗಿತ

Suddi Udaya

ಧರ್ಮಸ್ಥಳ ಭಕ್ತರಿಂದ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಪಿಲ್ಯ: ಎರಡು ಕಾರುಗಳ ನಡುವೆ ಅಪಘಾತ: ಮಗು ಸೇರಿದಂತೆ ನಾಲ್ವರಿಗೆ ಗಾಯ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ-ಶ್ರೀಮತಿ ಸರೋಜ ಶೆಟ್ಟಿ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya
error: Content is protected !!