ವೇಣೂರು;ಪಡ್ಡoದಡ್ಕ ಮುನವಿರುಳ್ ಇಸ್ಲಾಂ ಮದರಸದ ವಠಾರದಲ್ಲಿ ಮದರಸ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆಯು ಮೇ 4ರಂದು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಅಧ್ಯಕ್ಷತೆಯಲ್ಲಿ ನಡೆಯಿತು
ಮುಖ್ಯಅತಿಥಿಯಾಗಿ ಮಾತಾಡಿದ ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಾಣಾಧಿಕಾರಿ ವೇಣೂರಿನ ಎಚ್ ಮಹಮ್ಮದ್ ಮಾತಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು,ಕಲಿಕೆ ಬಗ್ಗೆ ಗಮನ ಹಾಗು ಸುಮಾರು 175 ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ದಾನವಾಗಿ ನೀಡಿದ ದಿವಂಗತ ಅಬ್ದುಲ್ ರಹಿಮಾನ್ ಕಟ್ಟೆ ಅವರ ನೆನಪಿಗೆ ನೀಡಿದ ಅವರ ಮಗ ದುಬಾಯಿಯಲ್ಲಿರುವ ಅನ್ಸಾರ್ ರವರನ್ನು ಅಭಿನಂದಿಸಿದರು. ನೋಟ್ ಪುಸ್ತಕಗಳನ್ನು ಕಟ್ಟೆ ಷರೀಫ್ ತನ್ನ ತಂದೆ ದಿವಂಗತ ಅಬೂಬಕರ್ ಕಟ್ಟೆ ಹಾಗು ಬೋಳೂರು ದಿವಂಗತ ಅಬ್ಬು ಬ್ಯಾರಿಯವರ ಸ್ಮರಣಾರ್ಥ ನೀಡಿದ್ದರು
ಕತೀಬ್ ಸಮೀರ್ ದಾರಿಮಿ ದುವಾ ಮಾಡಿದರು, ಸಿಬಂದಿಗಳಾದ ಅಬ್ದುಲ್ ರಹಿಮಾನ್ ಯಮಾನಿ ಮತ್ತು ನಜೀರ್ ಹನೀಫಿ ಕಾರ್ಯಕ್ರಮ ನಿರ್ವಹಿಸಿದರು
ಈ ಸಂದರ್ಭದಲ್ಲಿ ಆದಮ್ ಎಸ್ ಕೆ,ಕಟ್ಟೆ, *ಪ್ರಧಾನ ಕಾರ್ಯದರ್ಶಿ ರಫಿಕ್ ಪಡ್ಡ,,ಜತೆ ಕಾರ್ಯದರ್ಶಿ ಅಬ್ದುಸಲಾಂ ಶಾಂತಿನಗರ ಮೊಹಮ್ಮದ್ ಹಾಜಿ,ಎಸ್ ಕೆ *ರಜಾಕ್,ಇಕ್ಬಾಲ್ ಕುರ್ಲೊಟ್ಟು , ಹಕೀಂ *ನಡುಹೋಟೆಲ್ ಸೇರಿದಂತೆ ಗಣ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಕೀಮ್ ಜಲಾಲಿ ಧನ್ಯವಾದವಿತ್ತರು.













