26.5 C
ಪುತ್ತೂರು, ಬೆಳ್ತಂಗಡಿ
September 20, 2026
ಚಿತ್ರ ವರದಿಬೆಳ್ತಂಗಡಿವರದಿ

ಧರ್ಮಸ್ಥಳ‌ ಭಜನಾ ಕಮ್ಮಟದ‌ ತರಬೇತುದಾರರಿಂದ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಶ್ರೀ ಬೈಲಾಂಜನೇಯ ಕುಣಿತ‌ ಭಜನಾ ಮಂಡಳಿ ಉದ್ಘಾಟನೆ

ಬೆಳ್ತಂಗಡಿ: ಶ್ರೀ ಬೈಲಾಂಜನೇಯ ಸ್ವಾಮಿ ವಿದ್ಯಾಸಂಸ್ಥೆ ಬೈರ ಶೆಟ್ಟಿ ಹಳ್ಳಿ ನೆಲಮಂಗಲ ಬೆಂಗಳೂರು ಇಲ್ಲಿನ ವಿದ್ಯಾರ್ಥಿಗಳಿಗೆ ಮೇ 3ರಂದು ಬೈಲಾಂಜನೇಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಮಸ್ವಾಮಿ ಇವರ ನೇತೃತ್ವದಲ್ಲಿ ವಿಶೇಷವಾಗಿ ಬೆಂಗಳೂರಿನ ನೆಲಮಂಗಲದಲ್ಲಿ ಕುಣಿತ ಭಜನಾ ಮಂಡಳಿ ಉದ್ಘಾಟನೆಗೊಳಿಸಿದರು.

ದೇವರನ್ನು ಅತೀ ಸುಲಭದಲ್ಲಿ ಒಲಿಸುವುದಿದ್ದರೆ ಅದು ಭಜನೆಯಿಂದ ಮಾತ್ರ ಸಾಧ್ಯ ಮಕ್ಕಳಲ್ಕಿ ಧಾರ್ಮಿಕತೆಯ ದೃಷ್ಟಿಯಲ್ಲಿ ಉತ್ತಮ ಸಂಸ್ಕಾರಗಳು ಬೆಳೆಯಬೇಕು ಮತ್ತು ಈಗಿನ ಯುವಪೀಳಿಗೆಯಲ್ಲಿ ಮೊಬೈಲ್ ಜಾಲಾತಾಣದಿಂದ ದೂರ ಸರಿದು ದೇವರ ಸಂಕೀರ್ತನೆಯಲ್ಲಿ ತನ್ನನು ತಾನು ತೊಡಗಿಸಿಕೊಂಡಲ್ಲಿ ಉತ್ತಮ ಇಂತಹ ಭಜನೆ ಈಗಿನ ದಿನಗಳಲ್ಲಿ ಈ‌ಭಾಗಕ್ಕೆ ಅವಶ್ಯಕತೆ ಇದೆ ಎಂದು ರಾಮಸ್ವಾಮಿ ಇವರು ತಿಳಿಸಿದರು.

ಈ‌ ತರಬೇತಿ ಶಿಬಿರದಲ್ಲಿ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಈ ಕುಣಿತ ಭಜನಾ ಶಿಬಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮರಬ್ಬ ಹಾಗೂ ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಮತ್ತು ರಾಜ್ಯ ಮಟ್ಟದ ಕುಣಿತ ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ ಮತ್ತು ಆಂಜನ್ ಮೂರ್ತಿ ಮುಖ್ಯ ಶಿಕ್ಷಕರು ಹಾಗೂ‌ ಹೆಚ್.ಕೆ.ರಮೇಶ್ ಟ್ರಸ್ಟಿಗಳು ,ತರಬೇತುದಾರರಾದ ಆಕಾಶ್, ಚರಣ್,ಸೃಜನ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.

Related posts

ಕರಾಯ ಅಲ್ ಬಿರ್ರ್ ಸ್ಕೂಲಿನಲ್ಲಿ ಇಶ್ಕೇ ರಸೂಲ್ ಮೀಲಾದ್ ಕಾರ್ಯಕ್ರಮ: ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ

Suddi Udaya

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

Suddi Udaya

ನೈನಾಡು ಶ್ರೀ ರಾಮ ಯುವಕ ಸಂಘ ದವರು ನೀಡಿದ ಸ್ಥಳದಲ್ಲಿ ನೂತನ ಅಂಗನವಾಡಿ ಕಟ್ಟಡ ಶುಭಾರಂಭ

Suddi Udaya

ನಾಳೆ(ಫೆ.8): ಮಾಲಾಡಿ ಗ್ರಾಮ ಪಂಚಾಯತ್‌ ವಠಾರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Suddi Udaya

ನ.19: ಬೆಳ್ತಂಗಡಿಯಲ್ಲಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

Suddi Udaya

ಕುತ್ಲೂರು ಹಾ.ಉ.ಸ.ಸಂಘದ ಅಧ್ಯಕ್ಷರಾಗಿ ರಾಜಶ್ರೀ, ಉಪಾಧ್ಯಕ್ಷರಾಗಿ ಸುಕುಮಾರ ಶೆಟ್ಟಿ ಆಯ್ಕೆ

Suddi Udaya
error: Content is protected !!