June 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಾರದ ಸಂತೆಗೆ ಸ್ಥಳಾವಕಾಶ ಕೊರತೆ: ವ್ಯಾಪಾರಿಗಳು ವಾಪಾಸು

ಬೆಳ್ತಂಗಡಿ: ಬೆಳ್ತಂಗಡಿಯ ಸೋಮವಾರ ಸಂತೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಅಡ್ಡಿಯಾಗಿದ್ದು, ಇದರಿಂದ ವ್ಯಾಪಾರಿಗಳು ಬಾರೀ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ವಾರ ಬಹಳ ಕಷ್ಟಪಟ್ಟು ವ್ಯಾಪಾರ ನಡೆಸಿದ ಸಂತೆ ವ್ಯಾಪಾರಿಗಳು ಈ ಬಾರೀ ವ್ಯಾಪಾರಕ್ಕೆ ಸ್ಥಳಾವಾಕಾಶ ಇಲ್ಲದೇ ವಾಪಾಸು ತೆರಳುವಂತಾಗಿದೆ.

ಬೆಳ್ತಂಗಡಿಯಲ್ಲಿ ಸಂತೆ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿ ಇಲ್ಲ. ಇರುವ ಸಂತೆ ಪ್ರಾಂಗಣದಲ್ಲಿ ಏಲಂ ಮೂಲಕ ಪಡೆದು ನಿತ್ಯ ವ್ಯಾಪಾರ ನಡೆಸುವವರು ಇದ್ದಾರೆ. ಉಳಿದಂತೆ ನಾಲ್ಕೈದು ವ್ಯಾಪಾರಿಗಳಿಗಷ್ಟೇ ಅವಕಾಶ ಇದೆ. ಉಳಿದವರು ರಸ್ತೆ ಬದಿ ವ್ಯಾಪಾರ ನಡೆಸುವವರು. ಸದ್ಯ, ಹೆದ್ದಾರಿ ಕಾಮಗಾರಿಗೆ ಎರಡೂ ಬಳಿ ಅಗೆಯಲಾಗಿದ್ದು ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ಕಳೆದ ಸೋಮವಾರವೂ ರಸ್ತೆ ಬದಿ ಸಂತೆ ವ್ಯಾಪಾರದಿಂದ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಈ ಭಾರಿ ಕಾಮಗಾರಿ ನಡೆಸುವಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ನೀಡಲಿಲ್ಲ. ವ್ಯಾಪಾರಕ್ಕೆ ಅವಕಾಶ ಇಲ್ಲದೇ ಕೆಲ ವ್ಯಾಪಾರಿಗಳು ಮಾರಿಗುಡಿ ಎದುರಿನ ರಸ್ತೆಯಲ್ಲಿ ವ್ಯಾಪಾರ ನಡೆಸಿದರೆ, ಉಳಿದ 15ಕ್ಕೂ ಹೆಚ್ಚು ವ್ಯಾಪಾರಿಗಳು ಸಂತೆ ವ್ಯಾಪಾರಕ್ಕೆ ಅವಕಾಶ ಇಲ್ಲದೇ ವಾಪಾಸು ತೆರಳಿದ್ದಾರೆ.

ಬೆಳ್ತಂಗಡಿ, ದೊಡ್ಡ ನಗರವಾದರೂ ಸಂತೆ ವ್ಯಾಪಾರಕ್ಕೆ ಸುಸರ್ಜಿತ ಮಾರುಕಟ್ಟೆ ಇರದೇ ಇರುವುದು ವಿಪರ್ಯಾಸ. ಸಂತೆ ವ್ಯಾಪಾರದ ಸುಂಕ ತೆಗೆದುಕೊಳ್ಳಲು ಬರುತ್ತಾರೆ ಆದರೆ ಸರಿಯಾದ ವ್ಯವಸ್ಥೆ ಮಾಡುವುದಿಲ್ಲ. ನಮ್ಮ ಪರಿಸ್ಥಿತಿ ಯಾರಿಗೂ ಬೇಡವಾಗಿದೆ. ಶಾಸಕರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವ್ಯಾಪಾರಿಗಳು ಬೇಸರ ತೋಡಿಕೊಂಡಿದ್ದಾರೆ.

Related posts

ಗೇರುಕಟ್ಟೆ: ಹಲೇಜಿ -ಕಲಾಯಿ ಸಂಪರ್ಕ ರಸ್ತೆಯ ಚೆಕ್ ಡ್ಯಾಮ್ ನಲ್ಲಿ ತುಂಬಿಕೊಂಡ ಮರದ ದಿಮ್ಮಿಗಳ ತೆರವು

Suddi Udaya

ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ‘ಸರ್ವ ಧರ್ಮ ‘ ಪ್ರಾರ್ಥನೆ

Suddi Udaya

ಗೇರುಕಟ್ಟೆ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 25 ಸಾವಿರ ಸಹಾಯಧನ ವಿತರಣೆ

Suddi Udaya

“ಸಿಂಧೂರ್” ಅರ್ಥಪೂರ್ಣವಾದ ಆಪರೇಷನ್: ಪೀತಾಂಬರ ಹೆರಾಜೆ

Suddi Udaya
error: Content is protected !!