ಬೆಳ್ತಂಗಡಿ: ಕರ್ನಾಟಕ ರಾಜ್ಯ ವಕ್ಫ್ ಇಲಾಖೆಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಫ್ತಿಯ ಕಿಲ್ಲೂರು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ನ ನವೀಕೃತ ಕಾಮಗಾರಿಗೆ ರೂ. 25 ಲಕ್ಷ ಬಿಡುಗಡೆಯಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಪ್ರತಾಪ್ ಸಿಂಹ ನಾಯಕ್ ಬೆಳ್ತಂಗಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಬಿ. ಝಡ್ ಝಮೀರ್ ಅಹ್ಮದ್ ಖಾನ್ ರವರನ್ನು ಬೇಟಿ ಮಾಡಿಸಿ ಮಸೀದಿಗೆ ಸಂಭಂದಪಟ್ಟಂತೆ ಅಗತ್ಯ ಕಾಮಗಾರಿಗಳು ಬಾಕಿ ಇರುವ ಬಗ್ಗೆ ಚರ್ಚಿಸಿ ಅನುದಾನಕ್ಕೆ ಮನವಿ ಮಾಡಿರುತ್ತಾರೆ, ಕೂಡಲೇ ಸ್ಪಂದಿಸಿದ ಸಚಿವರು ರೂ.25 ಲಕ್ಷ ಹಣವನ್ನು ಬಿಡುಗಡೆಗೊಳಿಸಿದರು.













