ನಾರಾವಿ: ಕುತ್ಲೂರು ಗ್ರಾಮದ ಅರಸ್ ಕಟ್ಟೆ ಪ್ರದೇಶದಲ್ಲಿ ಮೇ.14 ಸುರಿದ ಭಾರಿ ಮಳೆಗೆ ಬೃಹತ್ ಮರ ಹಾಗೂ ವಿದ್ಯುತ್ ಕಂಬ ನೆಲಕ್ಕೂರುಳಿದ್ದು ವಾಹನಗಳು ಜಖಂಗೊಂಡಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಿರುಗಾಳಿಯಿಂದಾಗಿ ಮರ ಮತ್ತು ಕಂಬ ರಸ್ತೆಯ ಮಧ್ಯೆ ಬಿದ್ದಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳೀಯರು ಕಾರ್ಯಾಚರಣೆ ನಡೆಸಿ ಸಂಚಾರವನ್ನು ಸುಗಮಗೊಳಿಸಿದರು.













