August 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮದುವೆ ಸಮಾರಂಭದಲ್ಲಿ ಮೊಳಗಿದ ವಿಷ್ಣು ಸಹಸ್ರನಾಮ

ಬೆಳ್ತಂಗಡಿ: ಇಂದಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಪಾಶ್ಚಾತ್ಯ, ಸಿನಿಮಾ ಸಂಸ್ಕೃತಿ, ನೃತ್ಯ ಸಹಿತ ನಾನಾ ಆಡಂಬರಗಳು ಸಾಮಾನ್ಯವಾಗಿದ್ದಾರೆ ಮೇ 14 ರಂದು ನಡೆದ ವಿವಾಹ ಸಮಾರಂಭ ಒಂದರಲ್ಲಿ ಸಾಮೂಹಿಕ ವಿಷ್ಣು ಸಹಸ್ರ ನಾಮವನ್ನು ಪಠಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಬೆಂಗಳೂರಿನ ಪ್ರಮೀಳಾ ಹಾಗೂ ಅಂತ್ರ ಹರೀಶ್ ರಾವ್ ದಂಪತಿ ಪುತ್ರ ಶ್ರೀಹರಿದಾಸ ಅವರ ವಿವಾಹ ಬೆಂಗಳೂರಿನ ರಶ್ಮಿ ಹಾಗೂ ಶ್ರೀಧರ ಬಿ.ಎಸ್. ಅವರ ಪುತ್ರಿ ಸ್ವಾತಿ ಮನಸ್ವಿನಿಯ ಜತೆ ಜರಗಿತು. ಮಧ್ಯಾಹ್ನ 12.05ರ ಸುಮೂಹೂರ್ತದಲ್ಲಿ ನಡೆದ ವಿವಾಹ ಸಮಾರಂಭದ ಸುಮಾರು 25 ನಿಮಿಷಗಳ ಕಾಲ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಇಲ್ಲಿನ ಸದಸ್ಯರು ಹಾಗೂ ಭಕ್ತರು ನಾವೂರಿನ ವೈದ್ಯ ಡಾ. ಪ್ರದೀಪ್ ಆಟಿಕುಕ್ಕೆಯವರ ನೇತೃತ್ವದಲ್ಲಿ ಮದುವೆಯಲ್ಲಿ ಪಾಲ್ಗೊಂಡಿದ್ದ 400ಕ್ಕಿಂತಲೂ ಅಧಿಕ ಮಂದಿಯ ಜೊತೆ ವಿಷ್ಣು ಸಹಸ್ರನಾಮವನ್ನು ಏಕಕಾಲದಲ್ಲಿ ಪಠಿಸಿದರು.

ಇಂದಿನ ಆಧುನಿಕ ಯುಗದಲ್ಲಿ ಹಳೆ ಪದ್ಧತಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ನಮ್ಮ ಪದ್ಧತಿಗಳ ಹಿಂದೆ ಅನೇಕ ವೈಜ್ಞಾನಿಕ ಹಿನ್ನೆಲೆಗಳು ಇದ್ದು, ಇವುಗಳ ಮಹತ್ವ ಅರಿತು ಇದನ್ನು ಮುಂದಿನ ಪೀಳಿಗೆಗೂ ತಲುಪಿಸುವಂತೆ ಮಾಡಬೇಕಾಗಿರುವುದು ಅಗತ್ಯವಾಗಿದೆ ಎಂದು ವರನ ಸೋದರ ಮಾವ ಚಾರ್ಮಾಡಿಯ ಪ್ರಕಾಶ ನಾರಾಯಣ ರಾವ್ ಹೇಳಿದರು.

Related posts

ಕೇಂದ್ರ ಸರ್ಕಾರ ನೇಮಿಸಿರುವ ಜಗದಾಂಬಿಕ ಪಾಲ್ ಅಧ್ಯಕ್ಷತೆಯ ಜಂಟಿ ಸದನ ಸಮಿತಿಗೆ ರಾಜ್ಯದ ರೈತರು ಹಾಗೂ ಹಿಂದೂಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾದ ವಿಸ್ತೃತ ವರದಿ ಸಲ್ಲಿಸಿಕೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಶಾಂತಿವನಕ್ಕೆ-ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೋಳಿ ಭೇಟಿ

Suddi Udaya

ಕುತ್ಲೂರು ಉ. ಹಿ.ಪ್ರಾ. ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಉಜಿರೆ: ಹೆದ್ದಾರಿ ಬದಿ ಕೊಳಚೆ ನೀರು ಸಂಗ್ರಹ: ಸಾಂಕ್ರಾಮಿಕ ರೋಗದ ಭೀತಿ

Suddi Udaya

ಬಂದಾರು: ಕುಂಟಾಲಪಲ್ಕೆ ನಿವಾಸಿ ಜಾರಪ್ಪ ನಿಧನ

Suddi Udaya

ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ ಅವರ ನೂತನ ಕಚೇರಿ ಉದ್ಘಾಟನೆ

Suddi Udaya
error: Content is protected !!