27.7 C
ಪುತ್ತೂರು, ಬೆಳ್ತಂಗಡಿ
May 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀ ಪಾಂಡುರಂಗ ಶಾಖೆಯ ವಾರ್ಷಿಕೋತ್ಸವ ವೈಭವ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪಾಂಡುರಂಗ ಶಾಖೆಯ ವಾರ್ಷಿಕೋತ್ಸವವು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಪಣೆಜಾಲ್ ನ ಸಂಭ್ರಮ ಸಭಾ ಭವನದಲ್ಲಿ ನೆರವೇರಿತು. ಯೋಗದ ಮಹತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಅನೇಕ ಯೋಗಬಂಧುಗಳು, ಯೋಗೇತರ ಬಂಧುಗಳು ಹಾಗೂ ಗಣ್ಯರು ಭಾಗವಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರಿನ ಹಿರಿಯ ಯೋಗ ಶಿಕ್ಷಕರಾದ ರವೀಶ್ ಭಾಗವಹಿಸಿ, ಯೋಗವು ಆರೋಗ್ಯಕರ ಜೀವನಕ್ಕೆ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಭಾ ಅಧ್ಯಕ್ಷತೆಯನ್ನು ಪಾಂಡುರಂಗ ಶಾಖೆಯ ಸಂಚಾಲಕರಾದ ದಿನೇಶ್ ವಹಿಸಿಕೊಂಡು, ಶಾಖೆಯ ಬೆಳವಣಿಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ನಮ್ಮ ಮನೆ ಶಾಖೆಯ ಸಂಚಾಲಕರಾದ ಸುಮಲತಾ ಉಪಸ್ಥಿತರಿದ್ದರು.
ಪಾಂಡುರಂಗ ಶಾಖೆಯ ಆನಂದ ಸ್ವಾಗತಿಸಿ, ವಾರ್ಷಿಕ ವರಧಿಯನ್ನು ಪಾಂಡುರಂಗ ಶಾಖೆಯ ಶಿಕ್ಷಕ ದಯಾನಂದ ವಾಚಿಸಿದರು. ಪಾಂಡುರಂಗ ಶಾಖೆಯ ಜಯಂತಿ ಧನ್ಯವಾದವಿತ್ತರು. ಚಿದಾನಂದ ಇಡ್ಯಾ ರವರ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ನಮ್ಮ ಮನೆ ಶಾಖೆ, ಶ್ರೀ ಪಾಂಡುರಂಗ ಶಾಖೆ ಹಾಗೂ ಮದ್ದಡ್ಕ ಶಾಖೆಯ ಯೋಗ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪಾಂಡುರಂಗ ಶಾಖೆಯ ಯೋಗ ಬಂಧು ವಿಧ್ಯಾ ವಿಶೇಷ ಮುತುವರ್ಜಿಯಿಂದ ಹಿರಿಯ ಯೋಗ ಬಂಧುಗಳಾದ ರಾಮಕೃಷ್ಣ , ಯೋಗೀಶ್ ರವರ ಸಲಹೆ ಸಹಕಾರದೊಂದಿಗೆ ಪಾಂಡುರಂಗ ಶಾಖೆ, ನಮ್ಮ ಮನೆ ಶಾಖೆ ಮದ್ದಡ್ಕ ಶಾಖೆಯ ಯೋಗ ಬಂಧುಗಳ ಒಗ್ಗೂಡುವಿಕೆಯಿಂದ ಶಿಕ್ಷಕರಾದ ಪ್ರದೀಪ್, ಆನಂದ ಸಹಕಾರದಿಂದ ನಡೆಯಿತು.

Related posts

ಮದುವೆ ಜೌತಣ ಕೂಟ: ಊಟ ಮಾಡಿದ ಹಲವು ಮಂದಿ ಅಸ್ವಸ್ಥ ಪ್ರಕರಣ : ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ಭೇಟಿ

Suddi Udaya

ಬೆಳ್ತಂಗಡಿ: ಅಯೋಧ್ಯೆ ಬಾಲರಾಮ ಮೂರ್ತಿ ಕೆತ್ತನೆ ಕೆಲಸದಲ್ಲಿ ಭಾಗಿಯಾದ ಶಿಲ್ಪಿ ಜಯಚಂದ್ರ ನಾಳ

Suddi Udaya

ಕಾಂಗ್ರೆಸ್ ಗ್ಯಾರಂಟಿಗಳಿಗೆ ಸರಕಾರ ರಚನೆಯಾದ ಮೇಲೆ ಹೊಸ ಹೊಸ ರೂಪ: ಯೋಜನೆಗಳ ಅನುಷ್ಠಾನದ ಬಗ್ಗೆ ರಾಜ್ಯದ ಜನತೆ ಭ್ರಮನಿರಸ: ಪತ್ರಿಕಾ ಹೇಳಿಕೆಯಲ್ಲಿ ಪ್ರತಾಪಸಿಂಹ ನಾಯಕ್ ಆರೋಪ

Suddi Udaya

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ, ಪೆಟ್ರೋಲ್-ಡೀಸೆಲ್ ಮಿತವಾಗಿ ಬಳಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

Suddi Udaya

ಗುರುವಾಯನಕೆರೆ: ಶಕ್ತಿನಗರದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಹರಿದ ನೀರು

Suddi Udaya

ಹಾಡುಹಗಲೇ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸಿ ಆತಂಕ ಸೃಷ್ಟಿದ ಕಾಡಾನೆ: ಬೈಕ್ ಸವಾರ ಅಪಾಯದಿಂದ ಪಾರು

Suddi Udaya
error: Content is protected !!