ಬೆಳ್ತಂಗಡಿ: ಸುದ್ದಿ ಉದಯ ಪತ್ರಿಕೆಯ ವೆಬ್ ಸೈಟ್ ನಲ್ಲಿ ವರದಿ ಪ್ರಕಟಗೊಳ್ಳುತ್ತಿದಂತೆ ಎಚೆತ್ತುಕೊಂಡ ಅರಣ್ಯ ಇಲಾಖೆ ಇಂದಬೆಟ್ಟು ಗ್ರಾಮದ ಕಜೆ ಪಿಲಪ್ಪಾಡಿ ಡೀಕಯ್ಯ ನಾಯ್ಕ್ ರವರ ಮನೆಗೆ ಭೇಟಿ ನೀಡಿದ್ದಾರೆ.
ಡೀಕಯ್ಯ ನಾಯ್ಕ್ ರ ಮನೆಯ ಕೋಳಿ ಗೂಡಿಗೆ ಕಾಡು ಪ್ರಾಣಿ ಲಗ್ಗೆ ಇಟ್ಟು ಎರಡು ಟರ್ಕಿ ಕೋಳಿಗಳನ್ನು ಹೊತ್ತೊಯ್ದಿದ್ದು, ಹುಲಿ ಮಾದರಿಯ ಚಿರತೆ ಅಥವಾ ಇನ್ಯಾವುದೇ ಪ್ರಾಣಿ ಆಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸಿ ಸುದ್ದಿ ಉದಯಕ್ಕೆ ವರದಿ ಕಳುಹಿಸಿದ್ದು, ವರದಿ ಪ್ರಕಟಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ನೀಡಿ ಸಂಜೆ ಬೊನ್ ಅಳವಡಿಸಿದ್ದಾರೆ.













