25.7 C
ಪುತ್ತೂರು, ಬೆಳ್ತಂಗಡಿ
August 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆಳ್ತಂಗಡಿ: ಕುಣಿತ‌ ಭಜನಾ ತರಬೇತುದಾರರ ‌ತಂಡದ‌ “ಭಜೋರೆ‌ ಮಾರುತಿ‌” ನೂತನ‌‌ ಲಾಂಚನ ಬಿಡುಗಡೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ಹಾಗೂ ಮಂಜುಶ್ರೀ ಭಜನಾ ಮಂಡಳಿ ಮೇಲಂತಬೆಟ್ಟು ಇದರ ಆಶ್ರಯದಲ್ಲಿ ‌ ಮೇ 17 ರಂದು ನಡೆದ ಮೇಲಂತಬೆಟ್ಟು ಭಜನಾ ಕಮ್ಮಟೋತ್ಸವ ದಲ್ಲಿ ಬೆಳ್ತಂಗಡಿ ತಾಲೂಕಿನ ಕುಣಿತ ಭಜನಾ ತರಬೇತುದಾರರ ತಂಡದ ಹೊಸ ನಾಮಕರಣದೊಂದಿಗೆ ಭಜೋರೆ‌ಮಾರುತಿ ಎಂಬ ನೂತನ ಲೋಗೋ ಅನಾವರಣ ಮಾಡಲಾಯಿತು.

ಈ ಲೋಗೋ ಬಿಡುಗಡೆ ಕಾರ್ಯಕ್ರಮ ದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಆನಂದ‌ ಸುವರ್ಣ ಇವರು…ಮತ್ತು ಜಯಶಂಕರ್ ಶರ್ಮ ಹಾಗೂ ಜಿಲ್ಲಾ‌ನಿರ್ದೇಶಕರಾದ ದಿನೇಶ್ ಪೂಜಾರಿಯವರು ಮತ್ತು ಯೋಜನಾಧಿಕಾರಿ ಯಶೋಧರ್ ಸಮನ್ವಾಯಾಧಿಕಾರಿ ಸಂತೋಷ್ ಅಳಿಯೂರು, ಕುಣಿತ ಭಜನಾ ತಂಡದ ಅಧ್ಯಕ್ಷರಾದ ಸಂದೇಶ್ ಮದ್ದಡ್ಕ, ಆಕಾಶ್ ಗುರುವಾಯನಕೆರೆ, ನಾಗೇಶ್ ಬಿ. ನೆರಿಯ, ಅಕ್ಷಯ್, ಚರಣ್, ಗೌತೇಶ್, ಸ್ರಜನ್ ಕುದ್ರಡ್ಕ, ಸರಾಜ್, ಅಭಿಷೇಕ್, ಹೇಮಂತ್, ವಿತೇಶ್, ಸಂತೋಷ್‌ ಕುತ್ಲೂರು, ವಿಕಾಸ್‌‌ ಮದ್ದಡ್ಕ ಮತ್ತು ರಾಮ್ ಕುಮಾರ್‌ಮಾರ್ನಾಡು‌‌‌ ಮತ್ತು‌ ಮೇಲಂತಬೆಟ್ಟು ಭಜನಾ ಮಂಡಳಿಯ ಅಧ್ಯಕ್ಷರು‌ಮತ್ತು ಸದಸ್ಯರು ಹಾಗೂ‌ ಗಣ್ಯರು ‌ಉಪಸ್ಥಿತರಿದ್ದರು

ಬೆಳ್ತಂಗಡಿ ತಾಲೂಕಿನ ಕುಣಿತ ಭಜನಾ ತರಬೇತುದಾರರು ಬೇರೆ ಬೇರೆ ಜಿಲ್ಲೆಗಳಲ್ಲಿ ಕುಣಿತ ಭಜನಾ ತರಬೇತುಗಳನ್ನು‌‌‌ನೀಡಿ ಸಾವಿರ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಭಜನಾ ತರಬೇತಿ ಗಳನ್ನು ನೀಡಿ ಅತ್ಯುತ್ತಮ ತಂಡವನ್ನು ರಚಿಸಿರುತ್ತಾರೆ.
ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಧರ್ಮಸ್ಥಳದಲ್ಲಿ ವರ್ಷಕ್ಕೆ ಒಂದು ರಾಜ್ಯ ಮಟ್ಟದ ತರಬೇತಿಯನ್ನು ರಚಿಸಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ತರಬೇತಿಯನ್ನು ಪಡೆದು ಭಜನಾ ಸಂಕೀರ್ತನೆಯನ್ನು ಪ್ರತೀ ಗ್ರಾಮಗಳಲ್ಲಿಯೂ ಪಸರಿಸುವಂತೆ ಆಗುತ್ತಿದೆ..

Related posts

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವಿವಿಧ ಪಕ್ಷಗಳು ಪಡೆದುಕೊಂಡ ಬೂತುವಾರು ಮತಗಳ ವಿವರ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ

Suddi Udaya

ಉಜಿರೆಯಲ್ಲಿ ಸುಬ್ರಹ್ಮಣ್ಯ ಶ್ರೀಗಳವರಿಂದ ತಪ್ತಮುದ್ರಾಧಾರಣೆ

Suddi Udaya

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Suddi Udaya

ಬೋಳಿಯಾರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬಂಗಾಡಿ ಶಾಲೆಯ ಶಿಕ್ಷಕ ಅಮಿತಾನಂದ ಹೆಗ್ಡೆ ರವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya
error: Content is protected !!