29.3 C
ಪುತ್ತೂರು, ಬೆಳ್ತಂಗಡಿ
May 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆಳ್ತಂಗಡಿ: ಕುಣಿತ‌ ಭಜನಾ ತರಬೇತುದಾರರ ‌ತಂಡದ‌ “ಭಜೋರೆ‌ ಮಾರುತಿ‌” ನೂತನ‌‌ ಲಾಂಚನ ಬಿಡುಗಡೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ಹಾಗೂ ಮಂಜುಶ್ರೀ ಭಜನಾ ಮಂಡಳಿ ಮೇಲಂತಬೆಟ್ಟು ಇದರ ಆಶ್ರಯದಲ್ಲಿ ‌ ಮೇ 17 ರಂದು ನಡೆದ ಮೇಲಂತಬೆಟ್ಟು ಭಜನಾ ಕಮ್ಮಟೋತ್ಸವ ದಲ್ಲಿ ಬೆಳ್ತಂಗಡಿ ತಾಲೂಕಿನ ಕುಣಿತ ಭಜನಾ ತರಬೇತುದಾರರ ತಂಡದ ಹೊಸ ನಾಮಕರಣದೊಂದಿಗೆ ಭಜೋರೆ‌ಮಾರುತಿ ಎಂಬ ನೂತನ ಲೋಗೋ ಅನಾವರಣ ಮಾಡಲಾಯಿತು.

ಈ ಲೋಗೋ ಬಿಡುಗಡೆ ಕಾರ್ಯಕ್ರಮ ದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಆನಂದ‌ ಸುವರ್ಣ ಇವರು…ಮತ್ತು ಜಯಶಂಕರ್ ಶರ್ಮ ಹಾಗೂ ಜಿಲ್ಲಾ‌ನಿರ್ದೇಶಕರಾದ ದಿನೇಶ್ ಪೂಜಾರಿಯವರು ಮತ್ತು ಯೋಜನಾಧಿಕಾರಿ ಯಶೋಧರ್ ಸಮನ್ವಾಯಾಧಿಕಾರಿ ಸಂತೋಷ್ ಅಳಿಯೂರು, ಕುಣಿತ ಭಜನಾ ತಂಡದ ಅಧ್ಯಕ್ಷರಾದ ಸಂದೇಶ್ ಮದ್ದಡ್ಕ, ಆಕಾಶ್ ಗುರುವಾಯನಕೆರೆ, ನಾಗೇಶ್ ಬಿ. ನೆರಿಯ, ಅಕ್ಷಯ್, ಚರಣ್, ಗೌತೇಶ್, ಸ್ರಜನ್ ಕುದ್ರಡ್ಕ, ಸರಾಜ್, ಅಭಿಷೇಕ್, ಹೇಮಂತ್, ವಿತೇಶ್, ಸಂತೋಷ್‌ ಕುತ್ಲೂರು, ವಿಕಾಸ್‌‌ ಮದ್ದಡ್ಕ ಮತ್ತು ರಾಮ್ ಕುಮಾರ್‌ಮಾರ್ನಾಡು‌‌‌ ಮತ್ತು‌ ಮೇಲಂತಬೆಟ್ಟು ಭಜನಾ ಮಂಡಳಿಯ ಅಧ್ಯಕ್ಷರು‌ಮತ್ತು ಸದಸ್ಯರು ಹಾಗೂ‌ ಗಣ್ಯರು ‌ಉಪಸ್ಥಿತರಿದ್ದರು

ಬೆಳ್ತಂಗಡಿ ತಾಲೂಕಿನ ಕುಣಿತ ಭಜನಾ ತರಬೇತುದಾರರು ಬೇರೆ ಬೇರೆ ಜಿಲ್ಲೆಗಳಲ್ಲಿ ಕುಣಿತ ಭಜನಾ ತರಬೇತುಗಳನ್ನು‌‌‌ನೀಡಿ ಸಾವಿರ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಭಜನಾ ತರಬೇತಿ ಗಳನ್ನು ನೀಡಿ ಅತ್ಯುತ್ತಮ ತಂಡವನ್ನು ರಚಿಸಿರುತ್ತಾರೆ.
ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಧರ್ಮಸ್ಥಳದಲ್ಲಿ ವರ್ಷಕ್ಕೆ ಒಂದು ರಾಜ್ಯ ಮಟ್ಟದ ತರಬೇತಿಯನ್ನು ರಚಿಸಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ತರಬೇತಿಯನ್ನು ಪಡೆದು ಭಜನಾ ಸಂಕೀರ್ತನೆಯನ್ನು ಪ್ರತೀ ಗ್ರಾಮಗಳಲ್ಲಿಯೂ ಪಸರಿಸುವಂತೆ ಆಗುತ್ತಿದೆ..

Related posts

ಪಾದಾಯಾತ್ರಿಗಳಿಗೆ ಕಲ್ಮಂಜದ ಮದಿಮಾಲಕಟ್ಟೆಯ ಜಾನಕಿ ಮತ್ತು ಮಕ್ಕಳಿಂದ ಅನ್ನದಾನ ಸೇವೆ

Suddi Udaya

ಎಕ್ಸೆಲ್ ನಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ: ಚಿತ್ಪಾವನ ಬ್ರಾಹ್ಮಣರ ಬಳಗದ ಮಹಾಸಭೆ

Suddi Udaya

ಬಳಂಜ ಅಭಿಮಾನಿ ಬಳಗದಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಾರ್ವಜನಿಕ ನುಡಿನಮನ

Suddi Udaya

ಮಡಂತ್ಯಾರಿನಲ್ಲಿ ಆಧಾರ್ ಶಿಬಿರ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬೆಳ್ತಂಗಡಿ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಬೆಂಬಲ

Suddi Udaya
error: Content is protected !!