28.3 C
ಪುತ್ತೂರು, ಬೆಳ್ತಂಗಡಿ
August 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಗಳೂರು ಪಟ್ಲ ಫೌಂಡೇಶನ್ ಹವ್ಯಾಸಿ ಘಟಕದಿಂದ ತಾಳಮದ್ದಳೆ

ಬೆಳ್ತಂಗಡಿ: ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಉಪ್ಪಿನಂಗಡಿ ಸಹಯೋಗದಲ್ಲಿ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕ ಮಂಗಳೂರು ಇದರ ಹತ್ತನೇ ಕಾರ್ಯಕ್ರಮವಾಗಿ ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದಲ್ಲಿ ಉತ್ತರನ ಪೌರುಷ ತಾಳಮದ್ದಳೆ ಜರಗಿತು.

ಯಕ್ಷದ್ರುವ ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ ಶೆಟ್ಟಿ .ಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ. ಕಳೆದ 11 ವರ್ಷಗಳಿಂದ ಯಕ್ಷಗಾನದ ಸಮಗ್ರ ಬೆಳವಣಿಗೆಗೆ ಪಟ್ಲ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳು ಅಪೂರ್ವವಾಗಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹವ್ಯಾಸಿ ಘಟಕದ ಅಧ್ಯಕ್ಷ ರಾಜಾರಾಮ ಹೊಳ್ಳ ಕೈ, ಕಾರ್ಯದರ್ಶಿ ವಿನಯ ಆಚಾರ್ ಹೊಸಬೆಟ್ಟು, ಕಾಳಿಕಾಂಬಾ ಯಕ್ಷಕಲಾ ಟ್ರಸ್ಟಿನ ಗೌರವ ಅಧ್ಯಕ್ಷ ಉಮೇಶ ಶೆಣೈ ,ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಂಬಾ ಪ್ರಸಾದ ಪಾತಾಳ,ಬಿ ಸುಬ್ರಹ್ಮಣ್ಯರಾವ್, ಸುರೇಶ ಪುತ್ತುರಾಯ ಇಚ್ಚೂರು,ಗೀತಾ ಕುದ್ದಣ್ಣಾಯ, ಗಂಗಾಧರ ಟೈಲರ್ ಉಪ್ಪಿನಂಗಡಿ, ಸುರೇಶ ರಾವ್. ಬಿ ಆಶಾ ರಾವ್, ಸುಶಾಂತ್ ಉಪಸ್ಥಿತರಿದ್ದರು. ಅತಿಥಿ ಕಲಾವಿದರನ್ನು ಶಾಲು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

ಉತ್ತರನ ಪೌರುಷ ತಾಳಮದ್ದಳೆ ಯಲ್ಲಿ ಭಾಗವತರಾಗಿ ರಾಜಾರಾಮ ಹೊಳ್ಳ, ಪದ್ಮನಾಭ ಕುಲಾಲ್ ಇಳಂತಿಲ ಹಿಮ್ಮೇಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್, ಹರಿಶ್ಚಂದ್ರ ನಾಯ್ಗ ಮಾಡೂರು, ಅರ್ಥಧಾರಿಗಳಾಗಿ ವಿನಯ ಆಚಾರ್ ಹೊಸಬೆಟ್ಟು (ಉತ್ತರ) ದಿವಾಕರ ಆಚಾರ್ಯ ಗೇರುಕಟ್ಟೆ (ಉತ್ತರೆ) ಶ್ರೀಧರ ಎಸ್ ಪಿ ಕೃಷ್ಣಾಪುರ (ಗೋಪಾಲಕ) ಗಣೇಶ ಕುಂಜತ್ತೂರು (ಬೃಹನ್ನಳೆ) ಭಾಗವಹಿಸಿದ್ದರು. ಕಾಳಿಕಾಂಬ ಯಕ್ಷಗಾನ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಕೆ. ಮಹಾಲಿಂಗೇಶ್ವರ ಭಟ್ ವಂದಿಸಿದರು. ಶ್ರೀಧರ ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು.

Related posts

ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ಅಣ್ಣಾಮಲೈ ವಿವಿಯಿಂದ ಡಾಕ್ಟರೇಟ್‌ ಪದವಿ

Suddi Udaya

ಮಚ್ಚಿನ ಸಹಕಾರಿ ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಮರೋಡಿ ಕ್ಷೇತ್ರ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Suddi Udaya

ರಾಜ್ಯದ ವಿವಿಧ ನಿಗಮ, ಮಂಡಳಿಗಳಿಗೆ ನಿರ್ದೇಶಕರುಗಳ ಆಯ್ಕೆ: ರಾಜ್ಯ ಮಟ್ಟದ ಸಮಿತಿಯ ಸದಸ್ಯರಾಗಿ ಹರೀಶ್ ಕುಮಾರ್ ನೇಮಕ

Suddi Udaya

ಕ್ಯಾಂಪ್ಕೊ ವತಿಯಿಂದ ಸಹಾಯಧನ ವಿತರಣೆ

Suddi Udaya

ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಾದ ಇಸ್ರೊ ಕೈಗೊಂಡ ಚಂದ್ರಯಾನ-3 ಯಶಸ್ವಿ: ಕೇದಾರನಾಥ ಯಾತ್ರೆ ಕೈಗೊಂಡಿದ್ದ ಬೆಳ್ತಂಗಡಿಯ ಯುವಕರು ಹರಿದ್ವಾರದಲ್ಲಿ ಸಂಭ್ರಮಾಚರಣೆ

Suddi Udaya
error: Content is protected !!