ಮುಂಡಾಜೆ: ಕೀರ್ತನಾ ಕಲಾ ತಂಡ ಮುಂಡಾಜೆ ಇದರ ವತಿಯಿಂದ ತಂಡದ ವಿದ್ಯಾರ್ಥಿ ಸದಸ್ಯರಿಗೆ ಉಚಿತ ಪುಸ್ತಕಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧು ಶೆಟ್ಟಿ ಹುರ್ತಾಜೆ ಇವರು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪುಸ್ತಕದ ಪ್ರಾಯೋಜಕರಾದ ಹರೀಶ್ ಪೂಜಾರಿಯವರು ಮಕ್ಕಳಿಗೆ ಪುಸ್ತಕ ವಿತರಿಸಿದರು. ಮುಖ್ಯ ಅತಿಥಿ ನಂದೀಶ್ ಭಂಡಾರಿ ಕೆ ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪುಸ್ತಕವನ್ನು ನೀಡಿದ ಹರೀಶ್ ಪೂಜಾರಿ ಹಾಗೂ ನಂದೀಶ್ ಭಂಡಾರಿ ಕೆ ಇವರನ್ನು ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಈ ವೇಳೆ ಗ್ರಾಮದಲ್ಲಿ ನಿಧನರಾದ ವಿಠಲ್ ರಾವ್ ಸಂಪಿಗೆ ಹಾಗೂ ಬಾಬು ಶೆಟ್ಟಿ ಭಾವಂತಬೆಟ್ಟು ಇವರ ಸ್ಮರಿಸಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಂಡದ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ, ನಾರಾಯಣ ಶೆಟ್ಟಿ ಮಂಜುಶ್ರೀ ನಗರ, ಪುರಂದರ ಗೌಡ, ತಂಡದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

ತಂಡದ ಅಧ್ಯಕ್ಷ ಸದಾನಂದ ಬಿ ಮುಂಡಾಜೆ ಸ್ವಾಗತಿಸಿ, ಕೇಶವ ಪೂಜಾರಿ ವಂದಿಸಿದರು. ಜಿತಿಕ್ಷಾ ನಿರೂಪಿಸಿದರು.












