29 C
ಪುತ್ತೂರು, ಬೆಳ್ತಂಗಡಿ
August 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆಳ್ತಂಗಡಿ: ಕುಣಿತ‌ ಭಜನಾ ತರಬೇತುದಾರರ ‌ತಂಡದ‌ “ಭಜೋರೆ‌ ಮಾರುತಿ‌” ನೂತನ‌‌ ಲಾಂಚನ ಬಿಡುಗಡೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ಹಾಗೂ ಮಂಜುಶ್ರೀ ಭಜನಾ ಮಂಡಳಿ ಮೇಲಂತಬೆಟ್ಟು ಇದರ ಆಶ್ರಯದಲ್ಲಿ ‌ ಮೇ 17 ರಂದು ನಡೆದ ಮೇಲಂತಬೆಟ್ಟು ಭಜನಾ ಕಮ್ಮಟೋತ್ಸವ ದಲ್ಲಿ ಬೆಳ್ತಂಗಡಿ ತಾಲೂಕಿನ ಕುಣಿತ ಭಜನಾ ತರಬೇತುದಾರರ ತಂಡದ ಹೊಸ ನಾಮಕರಣದೊಂದಿಗೆ ಭಜೋರೆ‌ಮಾರುತಿ ಎಂಬ ನೂತನ ಲೋಗೋ ಅನಾವರಣ ಮಾಡಲಾಯಿತು.

ಈ ಲೋಗೋ ಬಿಡುಗಡೆ ಕಾರ್ಯಕ್ರಮ ದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಆನಂದ‌ ಸುವರ್ಣ ಇವರು…ಮತ್ತು ಜಯಶಂಕರ್ ಶರ್ಮ ಹಾಗೂ ಜಿಲ್ಲಾ‌ನಿರ್ದೇಶಕರಾದ ದಿನೇಶ್ ಪೂಜಾರಿಯವರು ಮತ್ತು ಯೋಜನಾಧಿಕಾರಿ ಯಶೋಧರ್ ಸಮನ್ವಾಯಾಧಿಕಾರಿ ಸಂತೋಷ್ ಅಳಿಯೂರು, ಕುಣಿತ ಭಜನಾ ತಂಡದ ಅಧ್ಯಕ್ಷರಾದ ಸಂದೇಶ್ ಮದ್ದಡ್ಕ, ಆಕಾಶ್ ಗುರುವಾಯನಕೆರೆ, ನಾಗೇಶ್ ಬಿ. ನೆರಿಯ, ಅಕ್ಷಯ್, ಚರಣ್, ಗೌತೇಶ್, ಸ್ರಜನ್ ಕುದ್ರಡ್ಕ, ಸರಾಜ್, ಅಭಿಷೇಕ್, ಹೇಮಂತ್, ವಿತೇಶ್, ಸಂತೋಷ್‌ ಕುತ್ಲೂರು, ವಿಕಾಸ್‌‌ ಮದ್ದಡ್ಕ ಮತ್ತು ರಾಮ್ ಕುಮಾರ್‌ಮಾರ್ನಾಡು‌‌‌ ಮತ್ತು‌ ಮೇಲಂತಬೆಟ್ಟು ಭಜನಾ ಮಂಡಳಿಯ ಅಧ್ಯಕ್ಷರು‌ಮತ್ತು ಸದಸ್ಯರು ಹಾಗೂ‌ ಗಣ್ಯರು ‌ಉಪಸ್ಥಿತರಿದ್ದರು

ಬೆಳ್ತಂಗಡಿ ತಾಲೂಕಿನ ಕುಣಿತ ಭಜನಾ ತರಬೇತುದಾರರು ಬೇರೆ ಬೇರೆ ಜಿಲ್ಲೆಗಳಲ್ಲಿ ಕುಣಿತ ಭಜನಾ ತರಬೇತುಗಳನ್ನು‌‌‌ನೀಡಿ ಸಾವಿರ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಭಜನಾ ತರಬೇತಿ ಗಳನ್ನು ನೀಡಿ ಅತ್ಯುತ್ತಮ ತಂಡವನ್ನು ರಚಿಸಿರುತ್ತಾರೆ.
ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಧರ್ಮಸ್ಥಳದಲ್ಲಿ ವರ್ಷಕ್ಕೆ ಒಂದು ರಾಜ್ಯ ಮಟ್ಟದ ತರಬೇತಿಯನ್ನು ರಚಿಸಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂದು ತರಬೇತಿಯನ್ನು ಪಡೆದು ಭಜನಾ ಸಂಕೀರ್ತನೆಯನ್ನು ಪ್ರತೀ ಗ್ರಾಮಗಳಲ್ಲಿಯೂ ಪಸರಿಸುವಂತೆ ಆಗುತ್ತಿದೆ..

Related posts

ಏ.15-25: ಕರಾಯ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸುಲ್ಕೇರಿ ಅ.ಹಿ. ಪ್ರಾ. ಶಾಲೆ, ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ

Suddi Udaya

ಉಜಿರೆ : ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ

Suddi Udaya

ಬೆಳ್ತಂಗಡಿ ತಹಶೀಲ್ದಾರ ಯಾಗಿ ಸುರೇಶ್ ಕುಮಾರ್ ಟಿ ಎಸ್ ನೇಮಕ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಜ.5: ಓಡಿಲ್ನಾಳ ಫ್ರೆಂಡ್ಸ್ ಪಣೆಜಾಲು ವತಿಯಿಂದ 14ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya
error: Content is protected !!