ಸೌತಡ್ಕ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ಸನ್ನಿಧಿಗೆ ಮಳೆಗಾಲದಲ್ಲಿ ಯಾತ್ರಾರ್ಥಿಗಳಿಗೆ ಬರಲು ಅನುಕೂಲವಾಗುವಂತೆ ಬ್ಯಾಂಕ್ ಆಫ್ ಬರೋಡಾ ದವರು ರೂ 5ಲಕ್ಷ ವೆಚ್ಚದಲ್ಲಿ ಕೊಡಮಾಡಿದ ರೂಫಿಂಗ್ ಟ್ರಾಲಿಯನ್ನು ಲೋಕಾರ್ಪಣೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ರಾಜ್ಯ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬ್ಯಾಂಕ್ ಆಫ್ ಬರೋಡಾ ದ ಪುತ್ತೂರು ವಿಭಾಗದ AGM ಯೋಗೀಶ್, RO ಭರತ್ ಶೆಟ್ಟಿ , ಶಾಖಾಧಿಕಾರಿ ಯೋಗೀಶ್, ಶಿಶಿಲ ಶಾಖಾ ಪ್ರಬಂಧಕ ರಾಜು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ ಸುಬ್ರಹ್ಮಣ್ಯ ಶಬರಾಯ, ಕಾರ್ಯನಿರ್ವಹಣಾಧಿಕಾರಿ ಏಸುರಾಜ್, ಸಮಿತಿ ಸದಸ್ಯರಾದ ಪ್ರಶಾಂತ್ ಮಚ್ಚಿನ, ವಿಶ್ವನಾಥ ಕೊಲ್ಲಾಜೆ , ಪ್ರಮೋದ್ ಕುಮಾರ್ ರೆಖ್ಯ , ಗಣೇಶ ಕಾಶಿ, ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ಪ್ರದಾನ. ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಅರ್ಚಕರಾದ ಸುಬ್ರಹ್ಮಣ್ಯ, ಮಾಜಿ ಸದಸ್ಯರಾದ ಗಣೇಶ ಪಿ.ಕೆ. ಪ್ರಶಾಂತ್ ರೈ ಅರಂತಬೈಲು, ವಿಶ್ವನಾಥ ಶೆಟ್ಟಿ, ಹಾಗೂ ದೇವಳದ ಸಿಬ್ಬಂದಿಗಳು ಉಪಸ್ತಿತರಿದ್ದರು.











