ನೆಲ್ಯಾಡಿ: ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ದಾದಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಅವರು ದಾದಿಯರ ನಿಸ್ವಾರ್ಥ ಸೇವೆ, ತ್ಯಾಗ ಮತ್ತು ಮಾನವೀಯ ಕಾಳಜಿಯನ್ನು ಕೊಂಡಾಡಿ, ಸಮಾಜದಲ್ಲಿ ಅವರ ಸೇವೆ ಅತ್ಯಂತ ಮಹತ್ತರವಾದದ್ದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೆಜಿನ ಕಕ್ಕಾಟ್ಟ್, ಸಂತೋಷ್ ಕಕ್ಕಾಟ್ಟ್, ಶೈನಿ ನಿರಪ್ಪೆಲ್, ಅಲಿನ ಪೆರುòಪಳ್ಳಿ, ಡೀನ ಕಾಂಜಿರತ್ತು ಮೂಟ್ಟಿಲ್,
ಸ್ಟೆಫಿ ಚೆòಪಿತ್ತಾನಮ್, ಅರ್ಚನಾ ಕಚೋಲಮಾಕ್ಕಿಲ್, ಶೆರ್ಲಿ ಎಂಬ್ರಾಂಡಿವಯಲಿಲ್, ಶಿಜಿ ಪಾರಪುರಂ, ಜೋಯಿಸಿ ತೊಂಡಿಯಾತಡಂ, ತ್ರೆಸಿಯಮ್ಮ ಮುನವಳ್ಳಿ, ಚಿಂಜು ಕಡವಿಲ್ , ಅನ್ನಮ್ಮ ಚುಂಡಯಿಲ್, ಗ್ರೇಸಿ ಅರಕ್ಕತರ
ಪ್ರಬೀನ ಅಂಬಾಟ್ಟ್ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮಾತ್ಯು, ಯುವಜನ ಸಂಘದ ದಿಶಾ ಮತ್ತು ಜಿತು, ಕ್ರೆಡಿಟ್ ಯೂನಿಯನ್ನ ಶಿಬು, ವಿನ್ಸೆಂಟ್ ಡಿ ಪೌಲ್ ಸಂಘದ ಸಣ್ಣಿ ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಜನರಲ್ ಜಿನೋಜ್ ಸನ್ಮಾನ ನೆರವೇರಿಸಿ, ಬೆರಿಲ್ ಕಾರ್ಯಕ್ರಮ ನಿರೂಪಿಸಿದರು.












