ಮುಂಡಾಜೆ : ಮಂಜುಶ್ರೀ ಭಜನಾ ಮಂದಿರ ಮಂಜುಶ್ರೀ ನಗರ ಮುಂಡಾಜೆ ಇದರ ವತಿಯಿಂದ ಭಜನಾ ಮಂಡಳಿಯ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಜರಗಿತು.
ಸಭೆಯ ಅಧ್ಯಕ್ಷ ಸ್ಥಾನವನ್ನು ನಾರಾಯಣ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚಂದ್ರಶೇಖರ ಗೌಡ ಅಗರಿ, ಸುದೇಶ್ ಪರಮುಖ, ನಂದೀಶ್ ಬಂಡಾರಿ,. ಗುಲಾಬಿ ಸುಂದರ ಗೌಡ ಭಾಗವಹಿಸಿದ್ದರು. ಕಾರ್ಯದರ್ಶಿ ಉಮೇಶ್ ಆಚಾರ್ಯ ಸ್ವಾಗತಿಸಿದರು. ರೇವತಿ ದಿನೇಶ್ ಆಚಾರ್ಯ ಹಾಗೂ ಉಷಾ ದಿನೇಶ್ ಗೌಡ ಕಾರ್ಯಕ್ರಮ ನಿರ್ವಹಿಸಿದರು. ರಂಜಿನಿ ರವಿಕುಮಾರ್ ಧನ್ಯವಾದವಿತ್ತರು. ಪ್ರಮೋದ್ ಪೂಜಾರಿ, ಪೂರ್ಣಿಮಾ ಸಹಕರಿಸಿದರು.











