ಬೆಳ್ತಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜು.17,18,19 ರಂದು ನಡೆಯಲಿರುವ ಟೆಂಟ್ ಡೇಕೊರ್ & ಕೇಟರಿಂಗ್ (TENT DECOR & CATERING) ನ ಎಕ್ಸ್ಪೋ ದ ಆಮಂತ್ರಣವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು , ಧರ್ಮಸ್ಥಳದ ಡಿ.ಹರ್ಷೆಂದ್ರ ಕುಮಾರ್ ಹಾಗೂ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಮೂಡಬಿದ್ರೆ ಇವರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಎಕ್ಸ್ಪೋ ಆಯೋಜಕರು, ಈಗಲ್ ಟ್ರೇಡ್ ಫೈರ್ ಮಾಲಕ ಎಸ್.ಕೆ ಪ್ರಭುದೇವ್, ಅಧ್ರಿತ್ ಫೈಬರ್ ನ ಮಾಲಕರಾದ ವಿನಾಯಕ ಕುಡ್ವ, ಎಕ್ಸ್ಪೋ ಸಂಘಟಕರು, ಬೆಳ್ತಂಗಡಿ ಫ್ಲವರ್ ಡೆಕೊರೇಷನ್ ವಲಯದ ಅಧ್ಯಕ್ಷರು, ಪಧಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
















