23.6 C
ಪುತ್ತೂರು, ಬೆಳ್ತಂಗಡಿ
August 30, 2026
Uncategorized

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ

ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಕಾರ್ಯಕ್ರಮಕ್ಕೆ ಹಿರಿಯರಾದ ಪೂವಪ್ಪ ಶೆಟ್ಟಿ ಬಿಳಿಬೈಲು ಅವರು ಚಾಲನೆ ನೀಡಿದರು.

ಶ್ರಾವಣ ಮಾಸದಲ್ಲಿ ದೇವಸ್ಥಾನದಿಂದ ಗಣೇಶ ಚತುರ್ಥಿಯ ಪವಿತ್ರವಾದ ದಿನದ ಸಂದರ್ಭದಲ್ಲಿ ವಿವಿಧ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಪೂಜೆಗಾಗಿ ಭತ್ತದ ತೆನೆಯನ್ನು (ಹೊಸತು) ಸಮರ್ಪಿಸುವ ಉದಾತ್ತ ಉದ್ದೇಶದಿಂದ ಈ ಕೃಷಿ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ದೇವಸ್ಥಾನದ ಅಭಿವೃದ್ಧಿ ಸಮಿತಿ, ಶ್ರೀ ದುರ್ಗಾ ಮಾೃತ ಮಂಡಳಿ, ಭಜನಾ ಮಂಡಳಿ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಹಾಗೂ ಭಕ್ತರು ಉಪಸ್ಥಿತರಿದ್ದರು.
ಪ್ರತಿ ವರ್ಷವೂ ದೇವಸ್ಥಾನದ ಗದ್ದೆಗೆ ಬೇಕಾಗುವ ನೇಜಿಯನ್ನು ಭಕ್ತರಾದ ಉಮನಾಥ ಶೆಟ್ಟಿ ಕುಲ್ಲುಂಜ ಅವರು ತಯಾರಿಸಿ ಕೊಡುತ್ತಾರೆ.

Related posts

ಜಡಿಮಳೆ: ಧರ್ಮಸ್ಥಳ ಪಂಜುರ್ಲಿ ಗುರಿ ಶ್ರೀನಿವಾಸ ರವರ ಮನೆಯ ಹಿಂಭಾಗ ಗುಡ್ಡ ಕುಸಿತ: ಮನೆಗೆ ಹಾನಿ

Suddi Udaya

ಬರೆಂಗಾಯ ಭೂತಳಗುಡ್ಡೆ ನಿವಾಸಿ ರವೀಂದ್ರ ರಾವ್ ನಿಧನ

Suddi Udaya

ಪಟ್ರಮೆ: ಪಾದೆ ನಿವಾಸಿ ಶ್ರೀಮತಿ ಪುಷ್ಪವತಿ ನಿಧನ

Suddi Udaya

ಹತ್ಯಡ್ಕ ನಿವಾಸಿ ಯಮುನಾ ನಿಧನ

Suddi Udaya

ಇಂದಬೆಟ್ಟು: ಬಂಗಾಡಿ ನಿವಾಸಿ ಜ್ವರದಿಂದ ಬಳಲಿ ಅವಿವಾಹಿತ ವಿಶ್ವನಾಥ ನಿಧನ

Suddi Udaya

ಮೈಸೂರು ಚಾಮರಾಜನಗರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಎರಡು ಸಾವಿರ ಮಂದಿಯಿಂದ ಧರ್ಮಸ್ಥಳ ಚಲೋ

Suddi Udaya
error: Content is protected !!