23.9 C
ಪುತ್ತೂರು, ಬೆಳ್ತಂಗಡಿ
September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಎ.ಬಿ.ಕೆ ಗಲ್ಫ್ ಕಮಿಟಿ ಕುದ್ರಡ್ಕ ವಾರ್ಷಿಕ ಮಹಾಸಭೆ ಹಾಗೂ “ಮೆಹ್ಫಿಲ್-ಈ-ಗಲ್ಫ್ ಮೀಟ್”

ಬೆಳ್ತಂಗಡಿ: ಅನಿವಾಸಿ‌ ಬ್ರದರ್ಸ್ ಕುದ್ರಡ್ಕ ಎ.ಬಿ.ಕೆ ಸಾಂತ್ವನ ಕಾರುಣ್ಯ ಗಲ್ಫ್ ಸಮಿತಿ ಕುದ್ರಡ್ಕ ಇದರ ವಾರ್ಷಿಕ ಮಹಾಸಭೆ ಹಾಗೂ “ಮೆಹ್ಫಿಲ್-ಈ-ಗಲ್ಫ್ ಮೀಟ್” ಗಲ್ಫ್ ಸ್ನೇಹಿತರ ಸ್ನೇಹ-ಸಮ್ಮಿಲನ ಕಾರ್ಯಕ್ರಮ ಮೇ28 ರಂದು ಸೌದಿ ಅರೇಬಿಯಾದ ದಮ್ಮಾಮ್ “ಗಝಾಝ್” ಇಸ್ತಿರಾದಲ್ಲಿ ನಡೆಯಿತು.

ಸೌದಿ ಅರೇಬಿಯಾದ ವಿವಿಧ ಭಾಗಗಳಿಂದ ಸದಸ್ಯರು ಭಾಗವಹಿಸಿದ್ದು ಹಾಗೂ ಯುಏಯಿ, ದುಬೈ ಹಾಗೂ ಅಬುದಾಬಿ ಸೇರಿದಂತೆ ಹೆಚ್ಚಿನ ಗಲ್ಫ್ ಸದಸ್ಯರು ಆಧುನಿಕ ಆನ್ಲೈನ್ ತಂತ್ರಜ್ಞಾನ ಸಂಪರ್ಕದ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮವು ಆಧ್ಯಾತ್ಮಿಕ ದ್ಸಿಕ್ರ್ ಸ್ವಲಾತ್, ತಹ್ಲೀಲ್ ಸಮರ್ಪಣೆ, ಮಜ್ಲಿಸ್, ದುವಾಃದೊಂದಿಗೆ ಪ್ರಾರಂಭಿಸಲಾಯಿತು.

ಎ.ಬಿ.ಕೆ ಗಲ್ಫ್ ಸಮಿತಿ ಇದರ ಮಾರ್ಗದರ್ಶಕ ನಿಝಾರ್ ಕೆ.ಎಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆ.ಎಮ್ ಕಳೆದ ಅವಧಿಯ ವರದಿ ಮಂಡಿಸಿದರು. ಸಾಮಾಜಿಕ-ಶೈಕ್ಷಣಿಕ ಸೇವೆ ಮತ್ತು ಜೀವಕಾರುಣ್ಯ ಸಾಂತ್ವನ ‌ಯಶಸ್ವಿ ಕಾರ್ಯವೈಖರಿಗಳು ಮತ್ತು ಭವಿಷ್ಯದಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ವಾರ್ಷಿಕ ಬಜೆಟ್ ಪ್ರಸ್ತಾಪಿಸಿದರು.ಕೋಶಾಧಿಕಾರಿ ಶಂಸುದ್ದೀನ್ ಕುದ್ರಡ್ಕ ಲೆಕ್ಕಪತ್ರ ವಾಚಿಸಿದರು.ಈ ವೇಳೆ 2026-27ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಇಮ್ತಿಯಾಝ್ ಕುದ್ರಡ್ಕ, ಉಪಾಧ್ಯಕ್ಷರಾಗಿ ಸಮೀರ್ ಕೆ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆ.ಎಮ್,ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಫೈಸ್ಟಾರ್, ಕೋಶಾಧಿಕಾರಿ ಶಂಸುದ್ದೀನ್ ಕುದ್ರಡ್ಕ ಹಾಗೂ ಕ್ಯಾಬಿನೆಟ್ ಸದಸ್ಯರುಗಳನ್ನೊಳಗೊಂಡ ನೂತನ ಸಮಿತಿ ರಚಿಸಲಾಯಿತು. ಕಾರ್ಯಕ್ರಮದಲ್ಲಿ “ಮೆಹ್ಫಿಲ್-ಈ-ಗಲ್ಫ್ ಮೀಟ್ ಸ್ನೇಹಿತರ ಚರ್ಚಾಗೋಷ್ಠಿ, ಸ್ನೇಹ ಭೋಜನ ಸಭೆಗೆ ಮೆರುಗು ತಂದುಕೊಟ್ಟಿತು.

Related posts

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ

Suddi Udaya

ಶಿಶಿಲ: ತುಳುನಾಡ ನರ್ಸರಿಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ

Suddi Udaya

ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳ ದಾಳಿ: ಅಪಾರ ಹಾನಿ

Suddi Udaya

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಂತೋಷ್ ಕಡಬ ಬೆಂಗಳೂರು ಪೊಲೀಸ್ ವಶಕ್ಕೆ

Suddi Udaya

ಮುಂಡಾಜೆ: ಕೊಡಂಗೆ ನಿವಾಸಿ ಕಿರಣ್ ಮರಾಠೆ ನಿಧನ

Suddi Udaya

ಅಧರ್ಮಿಗಳ ಅಟ್ಟಹಾಸ ಅಂತ್ಯವಾಗಬೇಕು: ಅನಿಲ್ ಕುಮಾರ್ ಯು

Suddi Udaya
error: Content is protected !!