ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿಯ ಪ್ರೊ. ಸುರೇಶ್ ವಿ. ಇವರು ನಿವೃತ್ತಿ ಹೊಂದಿದ ಕಾರಣ ಸುಳ್ಯ ತಾಲೂಕಿನ ನೆಟ್ಟಾರು ಗ್ರಾಮದ ಪ್ರೊ. ಪದ್ಮನಾಭ ಕೆ. ಇವರು ಕಾಲೇಜಿನ ಪ್ರಾಂಶುಪಾಲರಾಗಿ ಮೇ 30ರಂದು (ಇಂದು) ಅಧಿಕಾರ ಸ್ವೀಕರಿಸಿದರು.
ಇವರು ಕಳೆದ ಮೂರು ದಶಕಗಳಿಂದ ವಾಣಿಜ್ಯ ವಿಭಾಗದ ಅಧ್ಯಾಪಕರಾಗಿ ಸುಳ್ಯ ಹಾಗೂ ಬೆಳಂದೂರು ಕಾಲೇಜಿನ ಪ್ರಾಂಶುಪಾಲರಾಗಿ, ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಅಪಾರವಾದ ಅನುಭವ ಹೊಂದಿದ್ದು ಸದರಿ ಕಾಲೇಜಿಗೆ ಮೇ 2023 ರಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕಾಲೇಜಿನ ಸರ್ವತೋಮುಖ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.












