ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಲವಾರು ವರ್ಷಗಳಿಂದ ಮಾರಾಟ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವರಾಮ್ ನಾಯ್ಕ್ ಇವರು ಸೇವಾ ನಿವೃತ್ತಿಗೊಳುತ್ತಿದ್ದು ಇವರ ಬೀಳ್ಕೊಡುಗೆ ಮೇ 30ರಂದು ಸಂಘದ ಶಾಖೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕವಿತಾ ಶೆಟ್ಟಿ, ನಿರ್ದೇಶಕರಾದ ಎಂ. ಹರಿದಾಸ ಪಡಂತ್ತಾಯ, ಶೇಖರ ನಾಯ್ಕ, ಚಂದ್ರಾವತಿ, ಮಮತ, ಗೋಪಾಲ ನಾಯ್ಕ ಬನ, ಕುಶಾಲಪ್ಪ ಗೌಡ, ಗೌಡ ಬಿರ್ಮೊಟ್ಟು , ಉದಿತ್, ಲೋಕೇಶ್ ನಾಳ, ಕೇಶವ ಪೂಜಾರಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.












