ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ವಸಂತೋತ್ಸವ ಕಾರ್ಯಕ್ರಮಲ್ಲಿ 51 ವರ್ಷಗಳ ಮೇಳದ ತಿರುಗಾಟ ಪೂರೈಸಿದ ಯಕ್ಷಗಾನ ಕಲಾವಿದ ವಸಂತಗೌಡ ಅವರನ್ನು ಯಕ್ಷ ಭಾರತಿ ಕನ್ಯಾಡಿ ಬೆಳ್ತಂಗಡಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಹರಿದಾಸ ಗಾಂಭೀರ ಧರ್ಮಸ್ಥಳ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಜೊತೆ ಕಾರ್ಯದರ್ಶಿ ರತ್ನವರ್ಮ ಜೈನ್ , ಟ್ರಸ್ಟಿಗಳಾದ ರವೀಂದ್ರ ಶೆಟ್ಟಿ ಬಳೆಂಜ, ಹರೀಶ ಕೊಳ್ತಿಗೆ, ಆಹ್ವಾನಿತ ಸದಸ್ಯರಾದ ಚಂದ್ರಶೇಖರ ಧರ್ಮಸ್ಥಳ, ಸಂಚಾಲಕ ಮಹೇಶ ಕನ್ಯಾಡಿ , ಮೇಳದ ಪ್ರಬಂಧಕರಾದ ಗಿರೀಶ್ ಹೆಗ್ಡೆ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಕಲಾಭಿಮಾನಿಗಳ ಸಹಕಾರದಿಂದ ಕಲಾವಿದ ವಸಂತ ಗೌಡರ ಯಕ್ಷಗಾನ ಕಲಾಯಾನದ ಸುವರ್ಣ ಸಂಭ್ರಮ ವಸಂತೋತ್ಸವ ಸಮಾರಂಭವು ಅಮೃತವರ್ಷಿಣಿ ಸಭಾಭವನದಲ್ಲಿ ಗೌರವ ಸನ್ಮಾನ, ಯಕ್ಷಗಾನದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.












