July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಮೆಡೆಕ್ಸ್ ಪಾಲಿಕ್ಲಿನಿಕ್ಸ್ ನಲ್ಲಿ ಖಾಸಗಿ ಬಸ್ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಗುರುವಾಯನಕೆರೆ ಮೆಡೆಕ್ಸ್ ಪಾಲಿಕ್ಲಿನಿಕ್ಸ್ ನಲ್ಲಿ ಖಾಸಗಿ ಬಸ್ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೂ 4ರಂದು ಆಯೋಜಿಸಲಾಯಿತು.

ವಿಕಾಸ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜ ಮಾತನಾಡಿ ಆರೋಗ್ಯವೇ ಭಾಗ್ಯ.ಈ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆಯಿಂದ ಹೆಚ್ಚಿನ ಜನರಿಗೆ ಒಳ್ಳೆಯ ಮಾಹಿತಿ ಸಿಗುತ್ತದೆ ಎಂದರು.

ಸುದ್ದಿ ಉದಯ ವಾರಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ ಇಂದಿನ ಒತ್ತಡದ ಜೀವನ ಪದ್ದತಿಯಲ್ಲಿ ಆರೋಗ್ಯವನ್ನು ಕಾಪಾಡುವುದೇ ಒಂದು ಸವಾಲಾಗಿದೆ. ಖಾಸಾಗಿ ಬಸ್ಸ್ ನೌಕರರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವುದರಿಂದ ತುಂಬಾ ಜನರಿಗೆ ಪ್ರಯೋಜನವಾಗಿದೆ ಎಂದರು.

ಖಾಸಗಿ ಬಸ್ ನೌಕರರ ಸಂಘದ ಗೌರವ ಸಲಹೆಗಾರರಾದ ಚಿದಾನಂದ ಸಾಲಿಯಾನ್ ಮಾತನಾಡಿ ನಮ್ಮಂತಹ ಬಸ್ ನೌಕರರನ್ನು ಗುರುತಿಸಿ ಬಸ್ ನೌಕರರ ಆರೋಗ್ಯದ ಕ್ಷೇಮಕ್ಕಾಗಿ ಐದು ದಿನಗಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಒಳ್ಳೆಯ ಬೆಳವಣಿಗೆ ಎಂದರು.

ವೇದಿಕೆಯಲ್ಲಿ ಡಾ | ವನೋರ ಲೋಬೊ,ಡಾ | ನಿಶಾ ಸಿಕ್ವೇರಾ, ಕಟ್ಟೆಮಾರ್ ಕ್ಷೇತ್ರದ ಧರ್ಮದರ್ಶಿ ಮನೋಜ್ ಕಟ್ಟೆಮಾರ್,ಖಾಸಗಿ ಬಸ್ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಿ ಕೆಂಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜ ಕೇಸರಿ ಸೇವಾ ಟ್ರಸ್ಟ್ ಕರ್ನಾಟಕದ ಸಂಸ್ಥಾಪಕರಾದ ದೀಪಕ್.ಜಿ ಬೆಳ್ತಂಗಡಿ, ಸರ್ವ ಪದಾಧಿಕಾರಿಗಳಾದ
ಪದ್ಮಪ್ರಸಾದ್, ನಾರಾಯಣ್, ಇಲಿಯಾಸ್, ಪ್ರವೀಣ್ ಪಿಂಟೋ ,ದಿವಾಕರ್, ಚಿದಾನಂದ್ ಸಾಲಿಯಾನ್, ಜಯ ಉಪ್ಪಿನಂಗಡಿ, ಚಾಬಕ್ಕ ಸೇರಿದಂತೆ ಖಾಸಗಿ ಬಸ್ ನೌಕರರ ಸಂಘದ ಹಲವು ಪದಾಧಿಕಾರಿಗಳು, ಮೆಡೆಕ್ಸ್ ಪಾಲಿಕ್ಲಿನಿಕ್ ನ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಚಾಲಕರಾದ ಚಾಬಕ್ಕ ಇವರನ್ನು ಗೌರವಿಸಲಾಯಿತು.

Related posts

ಮಡಂತ್ಯಾರು: ಎಲೆಕ್ಟ್ರಿಕಲ್ ಉದಯ ಹೃದಯಾಘಾತದಿಂದ ನಿಧನ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ 66ನೇ ವರ್ಷದ ಶ್ರೀ ರಾಮ ನಾಮ ತಾರಕ ಮಂತ್ರ ಸಪ್ತಾಹಕ್ಕೆ ಚಾಲನೆ

Suddi Udaya

ಧಮ೯ಸ್ಥಳ ಶರಾವತಿ ವಸತಿ ಗೃಹದ ಎದುರು ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ: ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ಮೃತ್ಯು

Suddi Udaya

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya

ಕೈಲಾರು ರಾಜಗೋಪಾಲ್ ಭಟ್ ರಿಂದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ವಾಸ್ತು ಗಿಡ ಸಮರ್ಪಣೆ

Suddi Udaya

ಶಟಲ್ ಬ್ಯಾಡ್ಮಿಟನ್ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!