ಬೆಳ್ತಂಗಡಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಉದ್ಯಮಿಯಾಗಿರುವ ಬೆಳ್ತಂಗಡಿಯ ತಿಮ್ಮಪ್ಪ (ರಾಘವ ) ಶೆಟ್ಟಿಯವರು ತನ್ನ ಹುಟ್ಟುಹಬ್ಬದಂದು ವಿಶೇಷ ಸೇವೆಯೊಂದನ್ನು ಮಾಡಿದ್ದಾರೆ. ಸಾಂಗ್ಲಿ ಜಿಲ್ಲೆಯ ಹೊರಪ್ರದೇಶ ಮಿರಾಜ್ ಭೋಸೆ ಪರ್ವತ ತಪ್ಪಲಿನಲ್ಲಿ ಸುಮಾರು 20 ಎಕ್ರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜ್ಞಾನಯೋಗಿ ಫೌಂಡೇಶನ್ ಸಾಂಗ್ಲಿ ಇದರ ಅಭಿವೃದ್ಧಿ ಕಾರ್ಯಗಳಿಗೆ ರೂ. 41 ಲಕ್ಷ ದೇಣಿಗೆ ನೀಡಿದ್ದಾರೆ.
ಈ ಪ್ರಕೃತಿ ರಮಣೀಯ ಸ್ಥಳದಲ್ಲಿ ಗೋಶಾಲೆ, ಜ್ಞಾನ ಮಂದಿರ, ಧ್ಯಾನ ಮಂದಿರ, ಯೋಗ ಕುಟೀರ, ಅನ್ನ ದಾಸೋಹ ಕಾರ್ಯಗಳು ನಿರಂತರವಾಗಿ ನೆರವೇರಲಿದೆ. ತಿಮ್ಮಪ್ಪ ಶೆಟ್ಟಿಯವರು ಸಾಂಗ್ಲಿ ಪರಿಸರದಲ್ಲಿ ಇಡ್ಲಿ ತಿಮ್ಮಪ್ಪರೆಂದೇ ಖ್ಯಾತರಾಗಿದ್ದಾರೆ.












