26.7 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿರ್ಲಾಲು ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ರಜತ ಮಹೋತ್ಸವ

ಅಳದಂಗಡಿ ವಲಯದ ಶಿರ್ಲಾಲು ಎ ಕಾರ್ಯಕ್ಷೇತ್ರದ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಅಧ್ಯಕ್ಷೆ ಪ್ರೇಮ ಕೋರ್ದೊಟ್ಟು ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮುಖಾಂತರ ವಾರ್ಷಿಕೋತ್ಸವವನ್ನು ಉದ್ಘಾಟಿಸಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಮಾತೃಶ್ರೀ ಅಮ್ಮನವರ ಕನಸನ್ನು ನನಸು ಮಾಡಿದ ಹೆಗ್ಗಳಿಕೆ ಈ ಅನ್ನಪೂರ್ಣೇಶ್ವರಿ ಸಂಘದ್ದು ಹಾಗೂ ಸಂಘ ಎಳೆಯ ಪ್ರಾಯದಲ್ಲಿ ನಮ್ಮ ಸಂಘ ಹೇಗೆ ಇತ್ತು ಎಂಬುದರ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ಗೋಡೆಯ ಮದ್ಯ ಇದ್ದ ಮಹಿಳೆಯರು ಹೊರಗಿನ ಪ್ರಪಂಚ ನೋಡಿದ್ದೇ ಗ್ರಾಮಾಭಿವೃದ್ಧಿ ಯೋಜನೆಯ ಈ ಅನ್ನಪೂರ್ಣನೇಶ್ವರಿ ಸಂಘದಿಂದ ಎಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ವಲಯ ಮೇಲ್ವಿಚಾರಕರಾದ ಯಶೋಧ ರವರು ಮತ್ತು ತರಬೇತಿಯನ್ನು ಪಡೆಯಲು ಬಂದ ಮೇಲ್ವಿಚಾರಕ ವಸಂತ ರವರು ಸಂಘಕ್ಕೆ ಶುಭ ಹಾರೈಸಿದರು. 25 ವರ್ಷದಿಂದ ಸಂಘ ನಡೆದು ಬಂದ ದಾರಿ ಮತ್ತು ಅದರ ಸದ್ವಿನಿಯೋಗ ಪಡೆದ ಬಗ್ಗೆ ಅನಿಸಿಕೆಯನ್ನು ಡೀಕಮ್ಮ ಕರ್ದೋಟ್ಟು ಮತ್ತು ಹರಿಣಾಕ್ಷಿಯವರು ವ್ಯಕ್ತಪಡಿಸಿದರು. ವಾರದ ಸಭೆ ನಡೆಯುವ ಮನೆಯವರಾದ ಶ್ರೀಮತಿ ಮನೀಷ ಲಕ್ಷ್ಮಣ ಪೂಜಾರಿಯವರು ಮಹಿಳೆಯರ ತಾಳ್ಮೆ ಮತ್ತು ಸಹನೆಯ ಬಗ್ಗೆ ಮಾತನಾಡಿದರು. ಸೇವಾ ಪ್ರತಿನಿಧಿಯವರಾದ ಚಂದ್ರವತಿಯವರು ತಮ್ಮ ಸಂಘದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿ ಸಂಘಕ್ಕೆ ಶುಭ ಹಾರೈಸಿದರು.

ಹರಿಣಾಕ್ಷಿ ನಿರೂಪಿಸಿ, ಶೋಭಾ ಕರ್ದೋಟ್ಟು ಸ್ವಾಗತಿಸಿದರು . ಶಿಲ್ಪ ಬಾರ್ಲೊಡಿ ಬೈಲ್ ಧನ್ಯವಾದವಿತ್ತರು.

Related posts

ರಾಜ್ಯಮಟ್ಟದ ಯುವಸಂಸತ್ತು ಸ್ಪರ್ಧೆ: ಎಸ್.ಡಿ.ಎಂ. ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ಕರ್ನಾಟಕ ಗಮಕ ಕಲಾ ಪರಿಷತ್, ವತಿಯಿಂದ ‘ಮನೆ ಮನೆ ಗಮಕ’ ವಿನೂತನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಗುಳಿ ಸ.ಹಿ.ಪ್ರಾ ಶಾಲೆಗೆ ರವಿಚಂದ್ರ ಗೌಡ ದಂಪತಿಯಿಂದ ಧ್ವಜಸ್ತಂಭ ಕೊಡುಗೆ

Suddi Udaya

ಅಭ್ಯಾಸ್ ಪಿಯು ಕಾಲೇಜು ಹಾಗೂ ಪ್ರಸನ್ನ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಬ್ಬಕ್ಕ ರಾಣಿಯ ವರ್ಷಾಚರಣೆಯ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳಗಾವಿ ಅಧಿವೇಶನ: ಅಧಿಕ ಮಳೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ: ಪ್ರತಾಪ್ ಸಿಂಹ ನಾಯಕ್

Suddi Udaya

ನಿಡ್ಲೆ: ಬೂಡುಜಾಲು ನಿವಾಸಿ ವಿಶ್ವನಾಥ ಶೆಟ್ಟಿ ನಿಧನ

Suddi Udaya
error: Content is protected !!