ಬೆಳ್ತಂಗಡಿ : ನಾವರ ಗ್ರಾಮದ ಪೋಯಿದೆಲು ನಿವಾಸಿ ದೇವಪ್ಪ ಯಾನೆ ಸುಧಾಕರ ಇವರು ಇತೀಚೆಗೆ ರಿಕ್ಷಾ ಅಪಘಾತದಿಂದ ಮೃತ ಪಟ್ಟಿರುತ್ತಾರೆ. ಇವರ ಕುಟುಂಬದವರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರ ಮೊತ್ತ ರೂ.2ಲಕ್ಷ ವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಳದಂಗಡಿ ಶಾಖೆಯ ಸಿಬ್ಬಂದಿಗಳು ಹಾಗೂ ಅಳದಂಗಡಿ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು, ಮೃತರ ತಾಯಿ , ಸಹೋದರ ಉಪಸ್ಥಿತರಿದ್ದರು.












