September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಮಜಲುವಿನಲ್ಲಿ ಎಸ್‌ಜೆಎಮ್ ರೇಂಜ್ ಕಾನ್ಫರೆನ್ಸ್ ಸಂಪನ್ನ

ಬೆಳ್ತಂಗಡಿ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಎಸ್‌ಜೆಎಮ್ ಉಪ್ಪಿನಂಗಡಿ ರೇಂಜ್ 140ರ ವತಿಯಿಂದ ಜೂ.17 ರಂದು ಹಿಮಾಯತುಲ್ ಇಸ್ಲಾಂ ಮದ್ರಸ ಹೊಸಮಜಲುವಿನಲ್ಲಿ ರೇಂಜ್ ಕಾನ್ಫರೆನ್ಸ್ ನಡೆಯಿತು.

ಕಾರ್ಯಕ್ರಮಕ್ಕೆ ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಡಿ.ಹೆಚ್ ಇಬ್ರಾಹಿಂ ಸಅದಿ ನೆಕ್ಕಿಲಾಡಿ ಅಧ್ಯಕ್ಷತೆ ವಹಿಸಿದ್ದರು. ಸತ್ತಾರ್ ಹಿಶಾಮಿ ಉಸ್ತಾದ್ ಖಿರಾಅತ್ ನೆರವೇರಿಸಿದರು. ಹೊಸಮಜಲು ಖತೀಬ್ ಮುಹಮ್ಮದ್ ಶಂಸೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.

ಫಿರೋಝ್ ಸಅದಿ ಸ್ವಾಗತಿಸಿದರು. ಬಳಿಕ ಮುಹಮ್ಮದ್ ರಫೀಖ್ ಅಹ್ಸನಿ ನೆಕ್ಕಿಲಾಡಿ 6ನೇ ತರಗತಿಯ ತಝ್ಕಿಯಾ ಪಾಠ-5 ಕುರಿತ ಹಾಗೂ ಇಸ್ಮಾಯಿಲ್ ಸಅದಿ ನೆಲ್ಯಾಡಿ ಅವರು 8ನೇ ತರಗತಿ ತಝ್ಕಿಯಾ ಪಾಠ-4 ಕುರಿತು ಪಾಠ ನಡೆಸಿ ಚರ್ಚೆ ಕೈಗೊಂಡರು.

9ನೇ ತರಗತಿ ದುರೂಸ್ 1, 2 ಹಾಗೂ 3 ಪಾಠಗಳನ್ನು ಆಧರಿಸಿ ಕ್ವಿಝ್ ಸ್ಪರ್ಧೆಯನ್ನು ಶರೀಫ್ ಸಅದಿ ನೆಕ್ಕಿಲಾಡಿ ನಡೆಸಿಕೊಟ್ಟರು.

ಮುಹಮ್ಮದ್, ಎಂ.ಕೆ ಇಬ್ರಾಹಿಂ ಹಾಗೂ ಇಬ್ರಾಹಿಂ ಖಲೀಲ್ ಉಸ್ತಾದ್ ಆಶಂಸ ಭಾಷಣ ಮಾಡಿದರು. ಅಬ್ದುಲ್ ಲತೀಫ್ ಸಖಾಫಿ ಕರ್ವೇಲ್ ಅವರು “ಹೊಸ ವರ್ಷ – ಹೊಸ ಹರುಷ” ವಿಷಯದ ಕುರಿತು ಪ್ರಬಂಧ ಮಂಡಿಸಿದರು.

ಮುಹಮ್ಮದ್ ರಾಶೀದ್ ಮದನಿ ನೆಲ್ಯಾಡಿ ನ್ಯೂಸ್ ರೀಡಿಂಗ್ ನಡೆಸಿದರೆ, ಅನ್ಸಿಫ್ ಸಅದಿ ಮೊರಂಕಳ ಆಲಾಪಣೆ ನಡೆಸಿದರು. ಕೊನೆಯಲ್ಲಿ ಅಬ್ದುಲ್ ಜಬ್ಬಾರ್ ಝೈನಿ ಕರ್ವೇಲು ಧನ್ಯವಾದ ಅರ್ಪಿಸಿದರು.

ರೇಂಜ್ ವ್ಯಾಪ್ತಿಯ ಮುಅಲ್ಲಿಮರು ಮತ್ತು ಸಂಬಂಧಿತ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೊಸಮಜಲು ಎಸ್‌ಬಿಎಸ್ ವತಿಯಿಂದ ಉಸ್ತಾದರಿಗೆ ಸ್ಮರಣಿಕೆ ಹಾಗೂ ಕೊಡುಗೆ ನೀಡಿ ಗೌರವಿಸಲಾಯಿತು. ಬಗೆಬಗೆಯ ತಿಂಡಿ ವ್ಯವಸ್ಥೆಯನ್ನು ಊರವರು ಸಂಯೋಜಿಸಿದ್ದರು.

Related posts

ಕುವೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ಮಳೆ ನೀರು

Suddi Udaya

ಮೇಲಂತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ

Suddi Udaya

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

Suddi Udaya

ಸೆ.3ರಂದು ನಡೆಯುವ ಸಾರ್ವಜನಿಕ ಸಭೆಯಲ್ಲಿ ನ್ಯಾಯಾಲದ ಆದೇಶ ಉಲ್ಲಂಘಿಸದಂತೆ – ತಾಲೂಕಿನಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ಬರದಂತೆ ಸೂಕ್ತ ಕ್ರಮ ಕೈಗೊಳ್ಳಲು- ಸಮಾನ ಮನಸ್ಕರಿಂದ ತಹಸೀಲ್ದಾರರಿಗೆ ಮನವಿ

Suddi Udaya

ಗೇರುಕಟ್ಟೆ: ವಿದ್ಯುತ್‌ ತಂತಿ ಮೇಲೆ ಅಪಾಯಕಾರಿ ಮರ

Suddi Udaya

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೌಡಿ ಶೀಟರ್ ಗಳು ಹಾಗೂ ಇತರ ಅಪರಾಧ ಹಿನ್ನೆಲೆಯನ್ನು ಹೊಂದಿರುವ ಆರೋಪಿಗಳ ಮನೆಗೆ ಪೊಲೀಸ್ ಭೇಟಿ ಪರಿಶೀಲನೆ

Suddi Udaya
error: Content is protected !!