ಕಲ್ಮಂಜ : ಗೆಳೆಯರ ಬಳಗ ಅಕ್ಷಯನಗರ ನಿಡಿಗಲ್ ಕಲ್ಮಂಜ ಇದರ ನೂತನ ಸಭಾಂಗಣ ನಿರ್ಮಾಣದ ಶಿಲಾನ್ಯಾಸ ಜೂ.18 ರಂದು ನಡೆಯಿತು.
ಬಳಗದ ಮಾರ್ಗದರ್ಶಕರು ಶ್ರೀ ಶಾಂತಿನಾಥ ಸ್ವಾಮಿ ಜೈನ ಬಸದಿ ನಿಡಿಗಲ್ ನ ಆಡಳಿತ ಮೊಕ್ತೇಸರಾದ ರತನ್ ಕುಮಾರ್ ಜೈನ್ ಹುಣಿಪ್ಪಾಜೆ ಗುತ್ತು ಭಾಗವಹಿಸಿ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಲಹೆಗಾರರಾದ ಧರ್ಣಪ್ಪ ಲಿಂಗಾಯತ, ಮೋನಪ್ಪ ಟಿ, ಸುಂದರ ಲಿಂಗಾಯತ, ಕೊರಗಪ್ಪ ಅಕ್ಷಯನಗರ, ಶ್ರೀಧರ ಅಕ್ಷಯನಗರ, ಭರತ್ ಅಕ್ಷಯನಗರ, ಕರುಣಾಕರ ಪೂಜಾರಿ ಅಂಬಡೆದಡಿ ಹಾಗೂ ಮಾಜಿ ಅಧ್ಯಕ್ಷರುಗಳಾದ ಉಮೇಶ್ ಪೂಜಾರಿ ಅಂಬಡೆದಡಿ, ಸಂತೋಷ್ ಪೂಜಾರಿ ಕೆರೆಕೋಡಿ, ನಿರಂಜನ್ ಪೂಜಾರಿ ಕಡಂಬು, ಭಾಸ್ಕರ ಟೈಲರ್ ಅಕ್ಷಯನಗರ, ಬಳಗದ ಅಧ್ಯಕ್ಷರಾದ ಸುಬ್ರಾಯ ಅಕ್ಷಯನಗರ, ಕಾರ್ಯದರ್ಶಿ ಅಶೋಕ್ ಪೂಜಾರಿ ಬಳ್ಳಿದಡ್ಡ ಹಾಗೂ ಮೋನಪ್ಪ ಅಕ್ಷಯನಗರ, ಅಶೋಕ್ ಶೆಟ್ಟಿ ಅಕ್ಷಯನಗರ, ಬಾಲ ಗೋಕುಲದ ಶ್ರೀಮತಿ ಜಯಂತಿ ವಿಶ್ವನಾಥ , ಶ್ರೀಮತಿ ಪುಷ್ಪಲತ ಭರತ್ ಮುಂತಾದವರು ಉಪಸ್ಥಿತರಿದ್ದರು.













