27.7 C
ಪುತ್ತೂರು, ಬೆಳ್ತಂಗಡಿ
June 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಿನಕರ ಪೂಜಾರಿ ಕಡ್ತಿಲರಿಗೆ ನುಡಿನಮನ: ಹೃದಯ ಶ್ರೀಮಂತಿಕೆಯ ವ್ಯಕ್ತಿ ದಿನಕರ ಪೂಜಾರಿಯವರು: ಸಂತೋಷ್ ಕುಮಾರ್ ಕಾಪಿನಡ್ಕ

ಬೆಳ್ತಂಗಡಿ: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮಾಜಿ ಆಡಳಿತ ಮೋಕ್ತೇಸರಾದ ದಿ.ದಿನಕರ ಪೂಜಾರಿ ಕಡ್ತಿಲ ಅವರಿಗೆ ನುಡಿನಮನ ಕಾರ್ಯಕ್ರಮ ಜೂ.18 ರಂದು ಉರುವಾಲು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಜೂ. 6 ರಂದು ನಿಧನರಾದ ಬೇಬಿ ಯಾನೆ ದಿನಕರ ಪೂಜಾರಿ ಕಡ್ತಿಲರಿಗೆ ಸಂತೋಷ್ ಕುಮಾರ್ ಕಾಪಿನಡ್ಕ ನುಡಿನಮನ ಸಲ್ಲಿಸಿ ಮಾತನಾಡಿ ಕಡ್ತಿಲ ಮನೆತನದ ನಂದಾದೀಪ ಹಾರಿಹೋಗಿದೆ. ಮನುಷ್ಯ ಜನಿಸಿದಾಗ ಅವನೊಂದಿಗೆ ಉಸಿರು ಇರುತ್ತದೆ ಆದರೆ ಹೆಸರಿರಲ್ಲ, ಸಾವಿನ ಬಳಿಕ ಉಸಿರು ನಿಲ್ಲುತ್ತದೆ ಜೀವಿತಾವಧಿಯಲ್ಲಿ ನಾವು ಮಾಡಿರುವ ಸಮಾಜಮುಖಿ ಕಾರ್ಯಗಳಿಂದ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ ಆ ನಿಟ್ಟಿನಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಿದ ಹೃದಯ ಶ್ರೀಮಂತಿಕೆಯ ಧೀಮಂತ ವ್ಯಕ್ತಿ ದಿನಕರ ಪೂಜಾರಿಯವರು ಎಂದು ನುಡಿದರು.

ಪದ್ಮುಂಜ ಸಿಎ ಬ್ಯಾಂಕ್ ನಿರ್ದೇಶಕಿ ಶಾರಾದ ಆರ್ ರೈ ಹಾಗೂ ಸುಂದರ ಶೆಟ್ಟಿ ಎಂಜಿರಪಲ್ಕೆ ನುಡಿನಮನ ಗೈದರು. ಮಾಜಿ ಸಚಿವ ಬಿ.ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಸಹಕಾರಿ ರತ್ನ ಭಾಸ್ಕರ್ ಎಸ್ ಕೊಟ್ಯಾನ್ ಕೊಳಕ್ಕೆಇರ್ವತ್ತೂರು, ವಸಂತ್ ಸಾಲಿಯಾನ್ ಕಾಪಿನಡ್ಕ, ಪದ್ಮರಾಜ್ ಆರ್. ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ಸಂಪತ್ ಬಿ.ಸುವರ್ಣ, ಕಿರಣ್‌ಚಂದ್ರ ಪುಷ್ಪಗಿರಿ, ಮಡಂತ್ಯಾರು ಸೇರ್ಕೆಡ್ ಹಾರ್ಟ್ ಸೊಸೈಟಿ ಅಧ್ಯಕ್ಷ ಲ್ಯಾನ್ಸಿ ಪಿಂಟೋ, ಬೆಳ್ತಂಗಡಿ ಬಂಟರ ಸಂಘ ಅಧ್ಯಕ್ಷ ಜಯಂತ್ ಶೆಟ್ಟಿ, ಜಗನ್ನಾಥ್ ಬಂಗೇರ ನಿರ್ಮಲ್, ಪೀತಂಬರಾ ಹೇರಾಜೆ, ಮಲೆಗಂಲ್ಲು ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠಲ್ ಶೆಟ್ಟಿ ಕೊಲ್ಲೋಟ್ಟು, ರಾಜು ಕೆ.ಸಾಲಿಯಾನ್ ಕಾಶಿಪಟ್ಣ, ಸಾರಿಗೆ ಅಧಿಕಾರಿ ಚರಣ್, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ದಂತ ವೈದ್ಯ ಡಾ.ಆಶಿಶ್ ಉಪ್ಪಿನಂಗಡಿ, ವಕೀಲ ಅನಿಲ್ ಯು, ಪತ್ನಿ ಕಮಲ ಪೂಜಾರಿ, ಮಕ್ಕಳಾದ ಯೋಗೀಶ್ ಪೂಜಾರಿ ಕಡ್ತಿಲ ಮತ್ತು ಹರಿಣಿ, ಸೊಸೆ ಸಂಧ್ಯಾ ಲಕ್ಷ್ಮೀ, ಅಳಿಯ ಧನಂಜಯ ಬಂಗೇರ, ಮೊಮ್ಮಕ್ಕಳಾದ ಸಂಯುಕ್ತ ಪೂಜಾರಿ ಕಡ್ತಿಲ, ಸಂಸ್ಕೃತಿ ವೈ ಎಸ್ ಪೂಜಾರಿ, ಸಾಹಿಲ್ ಅಂಚನ್, ಪ್ರಕೃತಿ, ತರುಣ್, ಪ್ರಗತಿ, ಮರಿಮಕ್ಕಳಾದ ದೀತ್ಯ ಮತ್ತು ಸಾನ್ವಿಕ, ಜಲಜ ವಿ.ಸಾಲಿಯಾನ್, ಭಾರತಿ ಸಂತೋಷ್ ಕುಮಾರ್, ಶಿವಧ್ಯಾನ್, ಸೌಮ್ಯಲಕ್ಷ್ಮೀ ರತ್ನಾಕರ ಸುವರ್ಣ, ಸಿಂಚನ, ಸುಬ್ರಹ್ಮಣ್ಯ ಸಹಿತ ಮೊದಲಾದವರು ಕಡ್ತಿಲ ದಿನಕರ ಪೂಜಾರಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

Related posts

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಡಾ. ಎಸ್.ಎಲ್.ಬೈರಪ್ಪರವರಿಗೆ ನುಡಿನಮನ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಶರೀಫ್ ಚಮ್ಮು ನಿಧನ

Suddi Udaya

ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣರವರಿಂದ ಸಂತಾಪ

Suddi Udaya

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ಕೊಠಡಿ ಉದ್ಘಾಟನೆ

Suddi Udaya

ನೆರಿಯ: ಕುಡುಮಡ್ಕ ಸೌಗಂಧಿಕ ಮನೆಯ ನೀಲಮ್ಮ ನಿಧನ

Suddi Udaya

ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ನೂತನ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ ದ್ವಜಸ್ತಂಭದ ಲೋಕಾರ್ಪಣೆ

Suddi Udaya
error: Content is protected !!