ಕುವೆಟ್ಟು: ಸ.ಉ.ಪ್ರಾ.ಶಾಲೆ ಕುವೆಟ್ಟು ಇಲ್ಲಿ ಸಂಭ್ರಮ ಶನಿವಾರವನ್ನು ಆಚರಿಸಲಾಯಿತು. ವಿಶೇಷ ಚೇತನ ವ್ಯಕ್ತಿ ಪವನ್ ಇವರೊಂದಿಗೆ ಸಂವಾದ ನಡೆಸಲಾಯಿತು. ತನಗೆ 2 ಕಣ್ಣು ಕಾಣಿಸದಿದ್ದರು ಯಾವ ರೀತಿಯಲ್ಲಿ ದೈನಂದಿನ ಚಟುವಟಿಕೆಗಳನ್ನು ಮಾಡುತ್ತಾರೆ, ಇತರರ ಸಹಕಾರ ಹೇಗೆ ಇತ್ತು ಎಂಬ ಅನುಭವವನ್ನು ಹಂಚಿಕೊಂಡರು. ಅಲ್ಲದೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ವಿದ್ಯಾರ್ಥಿಗಳಲ್ಲಿ ವಿಕಲಚೇತನರೀಗೆ ಗೌರವ ನೀಡಬೇಕು ಪ್ರೀತಿ ಕಾಣಬೇಕು ಎಂಬ ಭಾವನೆ ಮೂಡಿ ಬಂತು.


ವಿಶೇಷ ಚೇತನ ವ್ಯಕ್ತಿ ಪವನ್ ಇವರನ್ನು ಶಾಲಾ ಮುಖ್ಯ ಶಿಕ್ಷಕ ಭಾಸ್ಕರ ಇವರು ಸ್ಮರಣಿಕೆ ಹಾಗೂ ನಗದು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕ ವೃಂದ ಸಹಕಾರ ನೀಡಿದರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













