ಬೆಳ್ತಂಗಡಿ: ಮರು ವಿನ್ಯಾಸಗೊಳಿಸಿದ ಬೆಳೆ ವಿಮೆಯ ಕಂತು ಪಾವತಿಗೆ ಸರಕಾರ ತೋಟಗಾರಿಕೆ ಇಲಾಖೆ ಮೂಲಕ ಆದೇಶ ಹೊರಡಿಸಿದ್ದು ಕಂತು ಪಾವತಿಸಲು ಜು.31 ಕೊನೆ ದಿನವಾಗಿದೆ. ಹಾಗಾಗಿ ನಮ್ಮ ಸಂಘದ ಸಾವಿರಾರು ರೈತರು ಬೆಳೆ ವಿಮೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಸಂಘಕ್ಕೆ ಬೆಳೆ ವಿಮೆ ಕಂತಿನ ಮೊತ್ತ ಸಂಗ್ರಹಿಸಲು ಆದೇಶ ಬಂದಿದ್ದು ಮುಂದಿನ ದಿನಗಳಲ್ಲಿ ಕಂತು ಸಂಗ್ರಹ ಆರಂಭಿಸಲಾಗುವುದು. ರೈತರು ಕೊನೆ ದಿನದ ವರೆಗೆ ಕಾಯದೆ ತ್ವರಿತವಾಗಿ ಕಂತು ಪಾವತಿಸುವುದು ಉತ್ತಮ ಎಂದು ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












