ಕರಾಯ: ಆಯುಷ್ ಇಲಾಖೆಯ ವತಿಯಿಂದ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಕರಾಯ ಘಟಕ, ಕರಾಯ ಶ್ರೀ ಕೃಷ್ಣ ಭಜನಾ ಮಂದಿರದ ಸಂಯುಕ್ತ ಆಶ್ರಯದಲ್ಲಿ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ದೀಪ ಪ್ರಜ್ವಲನದ ಮೂಲಕ ಶ್ರೀ ಕೃಷ್ಣ ಭಜನಾ ಮಂದಿರ ಕರಾಯದಲ್ಲಿ ಮಾಡಲಾಯಿತು.


ಮಕ್ಕಳು ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಕರಾಯ ಇದರ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ವಿಶ್ವ ಹಿಂದೂ ಪರಿಷತ್ತ್ ಬಜರಂಗದಳ ಕರಾಯ ಘಟಕದ ಬಾಲಕೃಷ್ಣ ಕುಲಾಲ್, ಮಂಜುನಾಥ ಸಾಮಿಯಾನದ ಮಾಲಕರಾದ ಉಮೇಶ್ ಸಾಲಿಯಾನ್, ಗಂಗಾಧರ ಹಾಗೂ ಆಯುಷ್ ಇಲಾಖೆ ತಣ್ಣೀರುಪಂಥ ಇದರ ಯೋಗ ತರಬೇತುದಾರರಾದ ರಮೇಶ ಉಪಸ್ಥಿತರಿದ್ದರು.
ರಮೇಶ ಯೋಗ ತರಬೇತಿಯನ್ನು ನೀಡಿ ಯೋಗ ದಿನಾಚರಣೆಯನ್ನು ಆಚರಿಸಿದರು. ರಾಜಶೇಖರ್ ರೈ ಪೆರೋಡಿ ಕಾರ್ಯಕ್ರಮದ ನಿರೂಪಿಸಿದರು.













