ವೇಣೂರು: ಇಲ್ಲಿಯ ಗೋಳ್ತ್ಯಾರು ನಿವಾಸಿ ಚೆನ್ನೈಯಲ್ಲಿ ಉದ್ಯೋಗದಲ್ಲಿದ್ದ ತಮ್ಮಯ್ಯ ದೇವಾಡಿಗ(64ವ)ರವರು ಜೂ.22ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ಇವರು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಹಾಗೂ ಇನ್ನಿತರ ಸಂದರ್ಭದಲ್ಲಿ ಚೆಂಡೆವಾದನ ಸೇವೆಯನ್ನು ನಡೆಸಿರುತ್ತಾರೆ. ಪ್ರಸಿದ್ಧ ವಾದ್ಯಪರಿಕರ ವಾದಕರಾದ ದಿ | ಆನಂದ ದೇವಾಡಿಗ ಮತ್ತು ಖ್ಯಾತ ಯಕ್ಷಗಾನ ಕಲಾವಿದ ದಿ| ವಾಮನ ಕುಮಾರ್ ಹಾಗೂ ಈಗ ದೇವಸ್ಥಾನದಲ್ಲಿ ಡೋಲುಗಂಟೆ ಕೆಲಸವನ್ನು ನಿರ್ವಹಿಸುತ್ತಿರುವ ಶ್ರೀಧರ ದೇವಾಡಿಗರರ ಸಹೋದರರಾಗಿರುತ್ತಾರೆ.
ಮೃತರು ತಾಯಿ ಮೋನಮ್ಮ, ಪತ್ನಿ ಕಲಾವತಿ, ಪುತ್ರಿ ರಾಶಿಕಾ, ಸಹೋದರ, ಸಹೋದರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.












