ಬೆಳ್ತಂಗಡಿ : ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಮಾಲಾಡಿ ಪಂಚಾಯತ್ ( ಮಾಲಾಡಿ ಸೋಣಂದೂರು ಗ್ರಾಮ) ವ್ಯಾಪ್ತಿಯ ನೂತನ ಸಮಿತಿಯನ್ನು ತಾಲೂಕು ಅಧ್ಯಕ್ಷೆ ಬಿನುತಾ ಬಂಗೇರ ಅವರ ನೇತೃತ್ವದಲ್ಲಿ ಎಸ್.ಕೆ.ಎಸ್ ಮಿನಿ ಹಾಲ್ ಕೊಲ್ಪೆದಬೈಲಿನಲ್ಲಿ ಜೂ.21 ರಂದು ರಚಿಸಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಜೆರಾಲ್ಡ್ ಮೋರಸ್ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಸೂರ್ಯ ನಾಯಕ್ ಪಣಕಜೆ, ಅಶ್ರಫ್ ಮಾಲಾಡಿ, ಶ್ರೀಮತಿ ಸೆಲೆಸ್ಟಿನ್ ಡಿ’ಸೋಜಾ, ಅನಿಲ್ ಪಿಂಟೊ,
ಶಂಶುದ್ದೀನ್ ಪಣಕಜೆ , ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಮೈಕಲ್ ಡಿ’ಸೋಜಾ
ರಿತೇಶ್ ಸೆರೆರಾವೊ, ಕೋಶಾಧಿಕಾರಿಯಾಗಿ ವಿನಯ್ ಕುಮಾರ್, ಗೌರವ ಸಲಹೆಗಾರರಾಗಿ ಮಾರ್ಸೆಲ್ ಫ್ರಾಂಕ್, ವಿಲ್ಫ್ರೆಡ್ ಗೊನ್ಸಾಲೆಸ್, ಆಲ್ಬರ್ಟ್ ಫೆರ್ನಾಂಡೀಸ್, ಸೋಶಿಯಲ್ ಮೀಡಿಯಾ ಉಸ್ತುವಾರಿ ಕೃಪಾಲ್ ಹಾಗೂ ಸದಸ್ಯರಾಗಿ ಲಾರೆನ್ಸ್ ಡಿ’ಸೋಜಾ, ಪೌಲಿನ್ ಮೆಂಡೊನ್ಸಾ, ಫ್ಲಾವಿಯಾ ಮೀನಾ ರೊಡ್ರಿಗಸ್, ಜೋಕಿಮ್ ಡಿ’ಸೋಜಾ, ಪ್ರವೀಣ್ ಡಿ’ಸೋಜಾ, ಅನ್ವರ್, ಅಬ್ದುಲ್ ರಜಾಕ್, ಭರತ್, ಧನುಷ್, ಜನಾರ್ದನ್, ಸುರೇಶ್.ಎಸ್, ಹಸನಬ್ಬ, ವಿನ್ಸೆಂಟ್ ರೊಡ್ರಿಗಸ್, ಕಲಂದರ್, ಎಸ್. ಎಮ್. ನಿಯಾಝ್ ಇವರನ್ನು ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ಬಂಗೇರ ಬ್ರಿಗೇಡ್ನ ಉಪಾಧ್ಯಕ್ಷ ಅನೂಪ್ ಎಂ ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ ಸಲೀಂ ., ಕೋಶಾಧಿಕಾರಿ ರಾಜಶ್ರೀ ರಮಣ್, ಸದಸ್ಯರಾದ ಜಯಾನಂದ ಸಭೆಯಲ್ಲಿ ಭಾಗವಹಿಸಿದ್ದರು. ಸಮಿತಿಯ ನೂತನ ಅಧ್ಯಕ್ಷರಾದ ಜೆರಾಲ್ಡ್ ಮೋರಸ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.












