ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಬದಿಗಳಲ್ಲಿ ಈಗಾಗಲೇ ಗಿಡಗಂಟಿಗಳು ಬೆಳೆದಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು ಮತ್ತು ರಸ್ತೆ ಬದಿ ಇರುವ ಚರಂಡಿಗಳಲ್ಲಿ ಹೂಳುಗಳು ತುಂಬಿದ್ದು ಇದರಿಂದ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಹರಿಯುತ್ತಿದ್ದು ಪ್ರತಿ ವರುಷದಂತೆ ಈ ಬಾರಿಯೂ ಈ ಎರಡು ಕೆಲಸವನ್ನು ತುರ್ತಾಗಿ ಮಾಡಬೇಕೆಂದು ಸಾರ್ವಜನಿಕರ ಪರವಾಗಿ ಇಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ್ ಬಿ.ಎಲ್ , ರುಕ್ಮಯ ಕನ್ನಾಜೆ, ಮಾಜಿ ಉಪಾಧ್ಯಕ್ಷ ಗಿರೀಶ್ ಡೂಂಗ್ರೆ, ಗಣೇಶ್. ಆರ್, ನಿಕಟ ಪೂರ್ವ ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ್ ಕುಮಾರ್, ಹರಿಕೃಷ್ಣ ಪುತ್ರಬೈಲು,ಸಿಎ ಬ್ಯಾಂಕ್ ನಿರ್ದೇಶಕರಾದ ರಮೇಶ್ ನಲಿಕೆ, ಪ್ರಶಾಂತ್ ರಾಮಗಿರಿ, ಮಂಜು ಕನ್ನಾಜೆ, ಉಪಸ್ಥಿತರಿದ್ದರು.













