27.1 C
ಪುತ್ತೂರು, ಬೆಳ್ತಂಗಡಿ
June 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಜೈನ್ ಮಿಲನ್ ಮಾಸಿಕ ಸಭೆ

ಬೆಳ್ತಂಗಡಿ : ಜೈನ್ ಮಿಲನಿನ ಮಾಸಿಕ ಕಾರ್ಯಕ್ರಮವು ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಕರಾದ ಡಾ.ಮಹಾವೀರ ಜೈನ ಮಾತನಾಡಿ ಜೈನಧರ್ಮದ ಕರ್ಮ, ಅಹಿಂಸೆ, ಅನೇಕಾಂತಗಳೆಂಬ ಮೂರು ಪ್ರಮುಖ ಸಿದ್ಧಾಂತಗಳನ್ನು ಪ್ರಸ್ತಾಪಿತಸುತ್ತದೆ, ಇದರಲ್ಲಿ ಕರ್ಮಸಿದ್ಧಾಂತ ಪ್ರಧಾನವಾಗಿದೆ. ಜೀವಿಗಳ ಬದುಕಿನ ಎಲ್ಲಾ ಸುಖ, ದುಃಖ ಸಾವು, ನೋವುಗಳ ಅನುಭವಗಳಿಗೆ ಅವರವರ ಆತ್ಮನಿಗೆ ಬಂಧವಾದ ಕರ್ಮವೇ ಕಾರಣವಾಗಿದೆ, ಕರ್ಮಗಳು ಸ್ವಯಾರ್ಜಿತವಾಗಿದೆ. ಎಂಟು ಕರ್ಮಗಳು ಮುಖ್ಯವಾಗಿದ್ದು ಇದನ್ನು 148 ಬೇಧಗಳಾಗಿ ವಿಂಗಡಿಸಲಾಗಿದೆ‌. ಇದರಲ್ಲಿ ಮುಖ್ಯವಾದ ಏಳು ಕರ್ಮಗಳನ್ನು ಜೀವಿಯು ತನ್ನ ಸ್ವಪ್ರಯತ್ನನಿಂದ ಶುಭ ಅಥವಾ ಅಶುಭಗಳಾಗಿ ಪರಿವರ್ತಿಸಬಹುದು ಆದರೆ ಆಯುಕರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾರತೀಯ ಜೈನ್ ಮಿಲನ್ ವಲಯ -8ರ ನಿರ್ದೇಶಕರಾದ ಬಿ. ಸೋಮಶೇಖರ್ ಶೆಟ್ಟಿ ಮಾತನಾಡಿ ಸಂಘಟನೆಯ ಮಹತ್ವದ ಮತ್ತು ಸದಸ್ಯರ ಸಕ್ರೀಯ ಭಾಗವಹಿಸುವಿಕೆಯ ಬಗ್ಗೆ ತಿಳಿಸಿದರು. ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾದ ಡಾ. ಸನ್ಮತಿ ಕುಮಾರ್ ಬೆಳ್ತಂಗಡಿ ಜೈನ್ ಮಿಲನಿನ ಮಂದಿನ ಕಾರ್ಯಯೋಜನೆಯು ಬಗ್ಗೆ ತಿಳಿಸಿದರು.

ಜ್ಯೋತಿ ಕುಮಾರಿ ಎಂ. ಎನ್ ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ರವೀಶ್ ಕುಮಾರ್ ಅತಿಥಿಗಳ ಪರಿಚಯವನ್ನು ಮಾಡಿದರು. ಬೆಳ್ತಂಗಡಿ ಜೈನ್ ಮಿಲನ್ ಕಾರ್ಯದರ್ಶಿ ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ಜೈನ್ ವಂದಿಸಿದರು.

Related posts

ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ನೇತೃತ್ವದಲ್ಲಿ ಇಂದು(ಡಿ.2) ಉಜಿರೆ ರಥಬೀದಿಯಲ್ಲಿ “ಯಕ್ಷ ಸಂಭ್ರಮ-2023”

Suddi Udaya

ಕೊಕ್ಕಡ ಮಾಸ್ತಿಕಲ್ಲುಮಜಲುನಲ್ಲಿ ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಯುವ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಶಿಶಿಲದಿಂದ ಪೇರಿಕೆ ಹೋಗುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಸಂಚಾರಕ್ಕೆ ತೊಂದರೆ

Suddi Udaya

ಖ್ಯಾತ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ರವರ ನಿಧನಕ್ಕೆ ಮಾಜಿ ಶಾಸಕ ಕೆ. ವಸಂತ ಬಂಗೇರ ಸಂತಾಪ

Suddi Udaya

ಮಿತ್ತಬಾಗಿಲು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ

Suddi Udaya
error: Content is protected !!