24.7 C
ಪುತ್ತೂರು, ಬೆಳ್ತಂಗಡಿ
August 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಜೈನ್ ಮಿಲನ್ ಮಾಸಿಕ ಸಭೆ

ಬೆಳ್ತಂಗಡಿ : ಜೈನ್ ಮಿಲನಿನ ಮಾಸಿಕ ಕಾರ್ಯಕ್ರಮವು ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಕರಾದ ಡಾ.ಮಹಾವೀರ ಜೈನ ಮಾತನಾಡಿ ಜೈನಧರ್ಮದ ಕರ್ಮ, ಅಹಿಂಸೆ, ಅನೇಕಾಂತಗಳೆಂಬ ಮೂರು ಪ್ರಮುಖ ಸಿದ್ಧಾಂತಗಳನ್ನು ಪ್ರಸ್ತಾಪಿತಸುತ್ತದೆ, ಇದರಲ್ಲಿ ಕರ್ಮಸಿದ್ಧಾಂತ ಪ್ರಧಾನವಾಗಿದೆ. ಜೀವಿಗಳ ಬದುಕಿನ ಎಲ್ಲಾ ಸುಖ, ದುಃಖ ಸಾವು, ನೋವುಗಳ ಅನುಭವಗಳಿಗೆ ಅವರವರ ಆತ್ಮನಿಗೆ ಬಂಧವಾದ ಕರ್ಮವೇ ಕಾರಣವಾಗಿದೆ, ಕರ್ಮಗಳು ಸ್ವಯಾರ್ಜಿತವಾಗಿದೆ. ಎಂಟು ಕರ್ಮಗಳು ಮುಖ್ಯವಾಗಿದ್ದು ಇದನ್ನು 148 ಬೇಧಗಳಾಗಿ ವಿಂಗಡಿಸಲಾಗಿದೆ‌. ಇದರಲ್ಲಿ ಮುಖ್ಯವಾದ ಏಳು ಕರ್ಮಗಳನ್ನು ಜೀವಿಯು ತನ್ನ ಸ್ವಪ್ರಯತ್ನನಿಂದ ಶುಭ ಅಥವಾ ಅಶುಭಗಳಾಗಿ ಪರಿವರ್ತಿಸಬಹುದು ಆದರೆ ಆಯುಕರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾರತೀಯ ಜೈನ್ ಮಿಲನ್ ವಲಯ -8ರ ನಿರ್ದೇಶಕರಾದ ಬಿ. ಸೋಮಶೇಖರ್ ಶೆಟ್ಟಿ ಮಾತನಾಡಿ ಸಂಘಟನೆಯ ಮಹತ್ವದ ಮತ್ತು ಸದಸ್ಯರ ಸಕ್ರೀಯ ಭಾಗವಹಿಸುವಿಕೆಯ ಬಗ್ಗೆ ತಿಳಿಸಿದರು. ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾದ ಡಾ. ಸನ್ಮತಿ ಕುಮಾರ್ ಬೆಳ್ತಂಗಡಿ ಜೈನ್ ಮಿಲನಿನ ಮಂದಿನ ಕಾರ್ಯಯೋಜನೆಯು ಬಗ್ಗೆ ತಿಳಿಸಿದರು.

ಜ್ಯೋತಿ ಕುಮಾರಿ ಎಂ. ಎನ್ ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ರವೀಶ್ ಕುಮಾರ್ ಅತಿಥಿಗಳ ಪರಿಚಯವನ್ನು ಮಾಡಿದರು. ಬೆಳ್ತಂಗಡಿ ಜೈನ್ ಮಿಲನ್ ಕಾರ್ಯದರ್ಶಿ ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ಜೈನ್ ವಂದಿಸಿದರು.

Related posts

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಪತ್ತೇದಾರಿ ಕಾದಂಬರಿ ” ವಿಷ ವರ್ತುಲ” ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಅನರ್ಹ ಬಿಪಿಎಲ್ ಕಾರ್ಡ್ ದಾರರಿಗೆ ನೋಟೀಸ್ ಜಾರಿ ಮಾಡಿದ ಆಹಾರ ಇಲಾಖೆ: ಬೆಳ್ತಂಗಡಿ ತಾಲೂಕಿನಲ್ಲಿ 2683 ಕಾರ್ಡ್ ರದ್ದತಿಗೆ ಸೂಚನೆ

Suddi Udaya

ನಾರಾವಿ ವಲಯ ಶ್ರೀ ಕ್ಷೇ.ಧ. ಗ್ರಾ. ಯೋಜನೆಯಿಂದ ಜನಮಂಗಲ ಕಾರ್ಯಕ್ರಮದಡಿ ಔಟ್ ಸೈಡ್ ವೀಲ್ ಚೇರ್ ವಿತರಣೆ

Suddi Udaya

ಬೆಳ್ತಂಗಡಿ : ಹಳೆಕೋಟೆಯಲ್ಲಿ ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಶುಭಾರಂಭ

Suddi Udaya

ಮಾ.20-27: ಶ್ರೀ ರಾಮಕ್ಷೇತ್ರದಲ್ಲಿ ಶ್ರೀ ರಾಮ ನಾಮ ತಾರಕ ಮಂತ್ರ ಸಪ್ತಾಹ- ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ

Suddi Udaya

ಸುರ್ಯ ಸ.ಕಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮುಳಿಯ ಜುವೆಲ್ಲರ್ಸ್ ವತಿಯಿಂದ ಬ್ಯಾಗ್ ವಿತರಣೆ

Suddi Udaya
error: Content is protected !!