27.1 C
ಪುತ್ತೂರು, ಬೆಳ್ತಂಗಡಿ
June 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಜೈನ್ ಮಿಲನ್ ಮಾಸಿಕ ಸಭೆ

ಬೆಳ್ತಂಗಡಿ : ಜೈನ್ ಮಿಲನಿನ ಮಾಸಿಕ ಕಾರ್ಯಕ್ರಮವು ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಕರಾದ ಡಾ.ಮಹಾವೀರ ಜೈನ ಮಾತನಾಡಿ ಜೈನಧರ್ಮದ ಕರ್ಮ, ಅಹಿಂಸೆ, ಅನೇಕಾಂತಗಳೆಂಬ ಮೂರು ಪ್ರಮುಖ ಸಿದ್ಧಾಂತಗಳನ್ನು ಪ್ರಸ್ತಾಪಿತಸುತ್ತದೆ, ಇದರಲ್ಲಿ ಕರ್ಮಸಿದ್ಧಾಂತ ಪ್ರಧಾನವಾಗಿದೆ. ಜೀವಿಗಳ ಬದುಕಿನ ಎಲ್ಲಾ ಸುಖ, ದುಃಖ ಸಾವು, ನೋವುಗಳ ಅನುಭವಗಳಿಗೆ ಅವರವರ ಆತ್ಮನಿಗೆ ಬಂಧವಾದ ಕರ್ಮವೇ ಕಾರಣವಾಗಿದೆ, ಕರ್ಮಗಳು ಸ್ವಯಾರ್ಜಿತವಾಗಿದೆ. ಎಂಟು ಕರ್ಮಗಳು ಮುಖ್ಯವಾಗಿದ್ದು ಇದನ್ನು 148 ಬೇಧಗಳಾಗಿ ವಿಂಗಡಿಸಲಾಗಿದೆ‌. ಇದರಲ್ಲಿ ಮುಖ್ಯವಾದ ಏಳು ಕರ್ಮಗಳನ್ನು ಜೀವಿಯು ತನ್ನ ಸ್ವಪ್ರಯತ್ನನಿಂದ ಶುಭ ಅಥವಾ ಅಶುಭಗಳಾಗಿ ಪರಿವರ್ತಿಸಬಹುದು ಆದರೆ ಆಯುಕರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾರತೀಯ ಜೈನ್ ಮಿಲನ್ ವಲಯ -8ರ ನಿರ್ದೇಶಕರಾದ ಬಿ. ಸೋಮಶೇಖರ್ ಶೆಟ್ಟಿ ಮಾತನಾಡಿ ಸಂಘಟನೆಯ ಮಹತ್ವದ ಮತ್ತು ಸದಸ್ಯರ ಸಕ್ರೀಯ ಭಾಗವಹಿಸುವಿಕೆಯ ಬಗ್ಗೆ ತಿಳಿಸಿದರು. ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾದ ಡಾ. ಸನ್ಮತಿ ಕುಮಾರ್ ಬೆಳ್ತಂಗಡಿ ಜೈನ್ ಮಿಲನಿನ ಮಂದಿನ ಕಾರ್ಯಯೋಜನೆಯು ಬಗ್ಗೆ ತಿಳಿಸಿದರು.

ಜ್ಯೋತಿ ಕುಮಾರಿ ಎಂ. ಎನ್ ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ರವೀಶ್ ಕುಮಾರ್ ಅತಿಥಿಗಳ ಪರಿಚಯವನ್ನು ಮಾಡಿದರು. ಬೆಳ್ತಂಗಡಿ ಜೈನ್ ಮಿಲನ್ ಕಾರ್ಯದರ್ಶಿ ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ಜೈನ್ ವಂದಿಸಿದರು.

Related posts

ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ: ಚೈತನ್ಯ ರೈ ಬೆಳ್ತಂಗಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಕೊಕ್ಕಡ ಗ್ರಾ. ಪಂ. ನಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸೌತಡ್ಕ ಕ್ಷೇತ್ರದ ವತಿಯಿಂದ ಗೌರವಾರ್ಪಣೆ

Suddi Udaya

ಗುರುವಾಯನಕೆರೆ ಮಯೂರ ಆರ್ಕೇಡ್‌ನಲ್ಲಿ ಬಾಲಕೃಷ್ಣ ಶೆಟ್ಟಿ ಮಾಲಕತ್ವದ “ನೇಸರ” ಸ್ಟುಡಿಯೋ & ವೀಡಿಯೋ ಶುಭಾರಂಭ

Suddi Udaya

ಪುಂಜಾಲಕಟ್ಟೆ ಕೆಪಿಎಸ್ ಪ.ಪೂ. ವಿಭಾಗದಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನ

Suddi Udaya

ಧರ್ಮಸ್ಥಳವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಸಚಿವ ಈಶ್ವರ ಖಂಡ್ರೆಯವರಿಂದ ಅಧಿಕೃತ ಘೋಷಣೆ

Suddi Udaya

ಎಕ್ಸೆಲ್ ನಲ್ಲಿ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಜ್ಯೋತ್ಸವ ಆಚರಣೆ ಎಕ್ಸೆಲ್ ವಿದ್ಯಾಸಂಸ್ಥೆ ಸದಾ ಕನ್ನಡದ ಸೇವೆಗೆ ಸಿದ್ಧ: ಸುಮಂತ್ ಕುಮಾರ್ ಜೈನ್

Suddi Udaya
error: Content is protected !!