24.7 C
ಪುತ್ತೂರು, ಬೆಳ್ತಂಗಡಿ
August 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಜೈನ್ ಮಿಲನ್ ಮಾಸಿಕ ಸಭೆ

ಬೆಳ್ತಂಗಡಿ : ಜೈನ್ ಮಿಲನಿನ ಮಾಸಿಕ ಕಾರ್ಯಕ್ರಮವು ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ.ಮಂ.ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಕರಾದ ಡಾ.ಮಹಾವೀರ ಜೈನ ಮಾತನಾಡಿ ಜೈನಧರ್ಮದ ಕರ್ಮ, ಅಹಿಂಸೆ, ಅನೇಕಾಂತಗಳೆಂಬ ಮೂರು ಪ್ರಮುಖ ಸಿದ್ಧಾಂತಗಳನ್ನು ಪ್ರಸ್ತಾಪಿತಸುತ್ತದೆ, ಇದರಲ್ಲಿ ಕರ್ಮಸಿದ್ಧಾಂತ ಪ್ರಧಾನವಾಗಿದೆ. ಜೀವಿಗಳ ಬದುಕಿನ ಎಲ್ಲಾ ಸುಖ, ದುಃಖ ಸಾವು, ನೋವುಗಳ ಅನುಭವಗಳಿಗೆ ಅವರವರ ಆತ್ಮನಿಗೆ ಬಂಧವಾದ ಕರ್ಮವೇ ಕಾರಣವಾಗಿದೆ, ಕರ್ಮಗಳು ಸ್ವಯಾರ್ಜಿತವಾಗಿದೆ. ಎಂಟು ಕರ್ಮಗಳು ಮುಖ್ಯವಾಗಿದ್ದು ಇದನ್ನು 148 ಬೇಧಗಳಾಗಿ ವಿಂಗಡಿಸಲಾಗಿದೆ‌. ಇದರಲ್ಲಿ ಮುಖ್ಯವಾದ ಏಳು ಕರ್ಮಗಳನ್ನು ಜೀವಿಯು ತನ್ನ ಸ್ವಪ್ರಯತ್ನನಿಂದ ಶುಭ ಅಥವಾ ಅಶುಭಗಳಾಗಿ ಪರಿವರ್ತಿಸಬಹುದು ಆದರೆ ಆಯುಕರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಭಾರತೀಯ ಜೈನ್ ಮಿಲನ್ ವಲಯ -8ರ ನಿರ್ದೇಶಕರಾದ ಬಿ. ಸೋಮಶೇಖರ್ ಶೆಟ್ಟಿ ಮಾತನಾಡಿ ಸಂಘಟನೆಯ ಮಹತ್ವದ ಮತ್ತು ಸದಸ್ಯರ ಸಕ್ರೀಯ ಭಾಗವಹಿಸುವಿಕೆಯ ಬಗ್ಗೆ ತಿಳಿಸಿದರು. ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾದ ಡಾ. ಸನ್ಮತಿ ಕುಮಾರ್ ಬೆಳ್ತಂಗಡಿ ಜೈನ್ ಮಿಲನಿನ ಮಂದಿನ ಕಾರ್ಯಯೋಜನೆಯು ಬಗ್ಗೆ ತಿಳಿಸಿದರು.

ಜ್ಯೋತಿ ಕುಮಾರಿ ಎಂ. ಎನ್ ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ರವೀಶ್ ಕುಮಾರ್ ಅತಿಥಿಗಳ ಪರಿಚಯವನ್ನು ಮಾಡಿದರು. ಬೆಳ್ತಂಗಡಿ ಜೈನ್ ಮಿಲನ್ ಕಾರ್ಯದರ್ಶಿ ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ಜೈನ್ ವಂದಿಸಿದರು.

Related posts

ಹರೀಶ್ ಪೂಂಜ ಬೃಹತ್ ಗೆಲುವು: ನಾರಾವಿಯಲ್ಲಿ ವಿಜಯೋತ್ಸವ

Suddi Udaya

ತೋಟತ್ತಾಡಿ: ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಬೆಳ್ತಂಗಡಿ ಯುವಮೋರ್ಚಾ ಮಂಡಲ ವತಿಯಿಂದ ಸಂಘಟನಾತ್ಮಕ ಸಭೆ

Suddi Udaya

ಕುತ್ಲೂರು ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನಿಂದ ನಾರಾವಿ ವಾಲ್ಮೀಕಿ ಆಶ್ರಮ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

Suddi Udaya

ಬೆಳ್ತಂಗಡಿಯ ಪ್ರತಿಷ್ಠಿತ ಕೇದೆ ಗುತ್ತಿನ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ

Suddi Udaya

ಪಂಜಾಬ್ ನಲ್ಲಿ ಅಕಾಂಕ್ಷ ಆತ್ಮಹತ್ಯೆ ಪ್ರಕರಣ: ಧರ್ಮಸ್ಥಳದ ಬೋಳಿಯಾರು ಮನೆಗೆ ತಲುಪಿದ ಮೃತದೇಹ

Suddi Udaya
error: Content is protected !!