ಅಳದಂಗಡಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಯಾಂತ್ರಿಕೃತ ಭತ್ತ ಕೃಷಿಗೆ ಅಳದಂಗಡಿ ಅರಮನೆ ತಿಮ್ಮಣ್ಣ ಅರಸರಾದ ಡಾ. ಪದ್ಮ ಪ್ರಸಾದ್ ಅಜಿಲರು ಸಸಿ ಮಡಿ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿಯಲ್ಲಿ ಯಂತ್ರಿಕರಣಕ್ಕೆ ಹೆಚ್ಚಿನ ಮಹತ್ವವನ್ನು ದೊರೆಯುತ್ತಿದ್ದು ಭತ್ತ ಬೆಳೆಯುವ ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬತ್ತ ಬೇಸಾಯವನ್ನು ಮಾಡಿದರೆ ಸಮಯ ಉಳಿತಾಯವಾಗುವುದು ಹೆಚ್ಚಿನ ಆದಾಯವನ್ನು ಗಳಿಸಲು ಸಹಕಾರಿಯಾಗಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಡಗ ಕಾರಂದೂರು ಎ ಒಕ್ಕೂಟದ ಅಧ್ಯಕ್ಷ ಹರೀಶ್ ಸಾಲಿಯಾನ್, ಕೃಷಿ ಮೇಲ್ವಿಚಾರಕ ಕೃಷ್ಣ, ವಲಯ ಮೇಲ್ವಿಚಾರಕಿ ಯಶೋಧ ಎಂ. ಹಾಗೂ ಸಿಹೆಚ್ಎಸ್ಸಿ ಮೆನೇಜರ್ ಹರೀಶ್, ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಆಚಾರ್ಯ, ಪ್ರಜಿತ್, ರಘು, ಬುಬಾ ಮೊಲ್ಯ, ಗಣೇಶ್, ಹರೀಶ್, ಶಾರದಾ, ಕಲ್ಯಾಣಿ, ಸೇವಾಪ್ರತಿನಿಧಿ, ಶುಭ ಹರೀಶ್ ರೈ, ಪೂರ್ಣಿಮಾ, ಹರಿಣಾಕ್ಷಿ, ನಾಟಿ ಯಂತ್ರ ಚಾಲಕ ಸುಮನ, ಸ್ಥಳೀಯ ರೈತರು ಉಪಸ್ಥಿತರಿದ್ದರು.













