ಬೆಳ್ತಂಗಡಿ : ಸರಕಾರ ಒಟ್ಟು 30 ಮಂದಿ ಗ್ರೇಡ್ -1 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದ್ದು.ಇದರಲ್ಲಿ ಬೆಳ್ತಂಗಡಿಯಲ್ಲಿ ಖಾಲಿ ಇದ್ದ ತಹಶೀಲ್ದಾರ್ ಹುದ್ದೆಗೂ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲೆಯ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಗ್ರೇಡ್-1 ತಹಶೀಲ್ದಾರ್ ಆಗಿರುವ ಎಸ್.ಎನ್.ನರಗುಂದ ಅವರನ್ನು ಬೆಳ್ತಂಗಡಿ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿ ಜು.2 ರಂದು ಆದೇಶ ಹೊರಡಿಸಿದೆ.













