ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜು.2ರಂದು ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಜರುಗಿತು.
ವೇದಿಕೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾದ ಶ್ರೀಧರ್ ಕೆ.ವಿ., ಕಾರ್ಯದರ್ಶಿ ಡಾ. ರಾಘವೇಂದ್ರ, ಪಿದಮಲೆ, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಪ್ರಭು, ರೋ. ಡಾ. ದಯಾಕರ್ ಎಂ.ಎಂ, ರೋ. ಯಶಸ್ವಿ ಸೋಮಶೇಖರ್, ರೋ.ಬೇಬಿ ಕುಂದರ್, ರೋ. ಡಾ.ಶಶಿಧರ್ ಡೋಂಗ್ರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಬೂಬಕ್ಕರ್ ವಿದ್ಯಾಕುಮಾರ್ ಕಾಂಚೋಡು, ಅನಂತ್ ಭಟ್ ಮಚ್ಚಿಮಲೆ, ಗಾಯತ್ರಿ, ಮನೋರಮ ಭಟ್, ಪೂರನ್ ವರ್ಮಾ, ಎಂಪಿಎಚ್ ಸಂದೇಶ್ ರಾವ್, ಜಯಕುಮಾರ್ ಶೆಟ್ಟಿ, ಅರುಣ್ ಕುಮಾರ್ ಎಂಎಚ್, ಎಂವಿ ಭಟ್, ಪ್ರವೀಣ್ ಗೋರೆ, ಶಶಿಕಾಂತ್ ಡೋಂಗ್ರೆ, ಡಾ.ಗೋಪಾಲಕೃಷ್ಣ, ಡಾ. ಗೋವಿಂದ ಕಿಶೋರ್, ಯಶವಂತ ಪಠವರ್ಧನ್, ಡಿಎಂ ಗೌಡ, ಶರತ್ ಕೃಷ್ಣ ಪಡುವೆಟ್ನಾಯ, ಆದರ್ಶ್ ಕಾರಂತ್, ಸೋಮಶೇಖರ್ ಶೆಟ್ಟಿ, ವೆಂಕಟೇಶ್ ಭಟ್ ಕಜೆ, ರೇಷ್ಮಾ ಹೆಗ್ಡೆ, ಧನಂಜಯ ರಾವ್ ಸೇರಿದಂತೆ ರೋಟರಿ ಇಂಟ್ರಾಕ್ಟ್ ನ ಪ್ರತಿನಿಧಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಾಕ್ಷಿ ಹೆಬ್ಬಾರ್ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ.ಪ್ರಕಾಶ್ ಪ್ರಭು ಪ್ರಸ್ತಾವಿಸಿ ಸ್ವಾಗತಿಸಿದರು. ಜಯಕುಮಾರ್ ಶೆಟ್ಟಿ ಸೋಮಶೇಖರ್ ಶೆಟ್ಟಿ ನಿರೂಪಿಸಿದರು. ರೋ. ಡಾ. ದಯಾಕರ್ ಎಂ.ಎಂ. ವಾರ್ಷಿಕ ವರದಿ ವಾಚಿಸಿದರು.













