ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೇವೆಯನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ನಾರಾವಿ ಪಂಚಮಿ ವಾಣಿಜ್ಯ ಸಂಕೀರ್ಣದಲ್ಲಿ “ಗಾಯತ್ರಿ ಮೆಡಿಕಲ್ಸ್” ಇದರ ಪ್ರಾರಂಬೋತ್ಸವವು ಜು.3 ಶುಕ್ರವಾರದಂದು ಬೆಳಿಗ್ಗೆ 8.30ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಸುನಂದ ಸುಂದರ ಕೋಟ್ಯಾನ್ ಅವರು ತಿಳಿಸಿದ್ದಾರೆ.
ಆರೋಗ್ಯದ ಕಾಳಜಿ ಮತ್ತು ಉತ್ತಮ ಸೇವೆಯನ್ನು ಪ್ರಧಾನ ಉದ್ದೇಶವನ್ನಾಗಿ ಮಾಡಿಕೊಂಡು ಆರಂಭವಾಗುತ್ತಿರುವ ಈ ಮೆಡಿಕಲ್ನಲ್ಲಿ ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಔಷಧಿಗಳು ಮತ್ತು ಆರೋಗ್ಯ ಸಂಬಂಧಿತ ಉತ್ಪನ್ನಗಳು ದೊರೆಯಲಿವೆ. ಆರೋಗ್ಯವೇ ನಿಜವಾದ ಸಂಪತ್ತು. ಸಣ್ಣ ಆರೋಗ್ಯ ಸಮಸ್ಯೆಗಳನ್ನೂ ನಿರ್ಲಕ್ಷಿಸದೇ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮತ್ತು ಔಷಧ ಸೇವನೆ ಮಾಡುವುದು ಮುಖ್ಯವಾಗಿದ್ದು ನಾರಾವಿ ಹಾಗೂ ಸುತ್ತ ಮುತ್ತಲಿನ ಗ್ರಾಹಕರಿಗೆ ಸುಲಭ ಸಮಯದಲ್ಲಿ ಔಷಧಗಳು ದೊರೆಯಲಿದೆ.
ಗಾಯತ್ರಿ ಮೆಡಿಕಲ್ಸ್ ನಲ್ಲಿ ಲಭ್ಯ
- ಎಲ್ಲಾ ರೀತಿಯ ವೈದ್ಯಕೀಯ ಔಷಧಿಗಳು * ಮಕ್ಕಳ ಮತ್ತು ಹಿರಿಯರ ಔಷಧಿಗಳು * ಆರೋಗ್ಯ ಮತ್ತು ಆರೈಕೆ ಉತ್ಪನ್ನಗಳು * ವೈದ್ಯರ ಸಲಹೆಯ ಔಷಧಿಗಳು * ಗುಣಮಟ್ಟದ ಸೇವೆ ಮತ್ತು ಗ್ರಾಹಕ ಸ್ನೇಹಿ ವ್ಯವಸ್ಥೆ ದೊರೆಯಲಿದೆ.














