July 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಭಕ್ತವೃಂದದಿಂದ ಬಡ ಕುಟುಂಬಕ್ಕೆ ಆರ್ಥಿಕ ಧನಸಹಾಯ

ಮಚ್ಚಿನ ಗ್ರಾಮದ ಕುತ್ತಿನ ಡಾಕಯ್ಯ ಗೌಡರು ರಸ್ತೆ ಅಪಘಾತದಲ್ಲಿ ಮರಣ,ಹೊಂದಿದ್ದು ಇವರು ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದರು, ಕುಟುಂಬದ ಆಧಾರ ಸ್ತಂಭವಾಗಿದ್ದ ಕುಟುಂಬ ಅನಾಥವಾಗಿದೆ. ನೊಂದ ಕುಟುಂಬಕ್ಕೆ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಹರ್ಷ ಸಂಪಿಗೆತ್ತಾಯ ಇವರು ಹಾಗೂ ದೇವಸ್ಥಾನದ ಭಕ್ತವೃಂದ ನೊಂದ ಕುಟುಂಬದ ಮನೆಗೆ ತೆರಳಿ ಸಾಂತ್ವನ ಹೇಳಿ ದೇವರ ಪ್ರಸಾದ ಹಾಗೂ ದೇವರ ಪ್ರಸಾದ ರೂಪವಾಗಿ 25000 ನಗದು ರೂಪದ ಚೆಕ್ ನ್ನು ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ| ಯಂ ಹರ್ಷಸಂಪಿಗೆತ್ತಾಯ, ಸುಧೀರ್ ಶೆಟ್ಟಿ ಕೋರಬೆಟ್ಟು, ಯತೀಶ್ ರೈ ಕೈಲ,ಪ್ರಮೋದ್ ಕುಮಾರ್ ಮಚ್ಚಿನ, ಚಂದ್ರಕಾಂತ್ ನಿಡ್ಡಾಜೆ ನಾರಾಯಣ ಪೂಜಾರಿ ಬಳ್ಳಮಂಜ ,ಹರ್ಷ ನಾರಾಯಣ ಶೆಟ್ಟಿ ನೆತ್ತರ, ಹೊನ್ನಪ್ಪ ಕುಲಾಲ್ ಮಣೂರು, ಹರೀಶ್ ಶೆಟ್ಟಿ ಕುತ್ತಿನ, ಗಂಗಾಧರ ಕುಲಾಲ್ ಪೆರ್ನಡ್ಕ, ಹರೀಶ್ ಪ್ರಭು ಮುದಲಡ್ಕ ಉಪಸ್ಥಿತರಿದ್ದರು.
✍️ಹರ್ಷ ಬಳ್ಳಮಂಜ

Related posts

ಚಿತ್ರಕಲಾ ಪರೀಕ್ಷೆ: ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಚುನಾವಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಧನ್ವಂತರಿ ಪೂಜೆ ಹಾಗೂ ದುರ್ಗಾಪೂಜೆ

Suddi Udaya

ಶ್ರೀ. ಧಂ. ಮಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Suddi Udaya

ಬೆಂಗಳೂರು ಕಾವ್ಯಶ್ರೀ ಸೇವಾ ಟ್ರಸ್ಟ್” ವತಿಯಿಂದ ಬಜಿರೆ ಶಾಲೆಯ ಇಬ್ಬರು ಅತಿಥಿ ಶಿಕ್ಷಕಿಯರಿಗೆ ಅತ್ಯುತ್ತಮ ಅತಿಥಿ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

Suddi Udaya

ಎಂಡೋಸಲ್ಫಾನ್ ವಿರುದ್ಧ ಹೋರಾಟಗಾರರಾದ ಕೊಕ್ಕಡದ ಶ್ರೀಧರ ಗೌಡ ಕೆಂಗುಡೇಲುರವರಿಗೆ “ವಿಕ ಹಿರೋಸ್” ಪ್ರಶಸ್ತಿ

Suddi Udaya
error: Content is protected !!