ಲಾಯಿಲ: ಅಲ್ ಬುಖಾರಿ ಜುಮ್ಮಾ ಮಸ್ಜಿದ್ ಕುಂಟಿನಿ ಮತ್ತು ಎಸ್.ಬಿ.ಎಸ್. ಕುಂಟಿನಿ ಮದರಸ ವತಿಯಿಂದ ಎನಾಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಇವರ ಸಹಕಾರದೊಂದಿಗೆ ಅಕಾಲಿಕವಾಗಿ ಅಗಲಿದ ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸದ ವಿದ್ಯಾರ್ಥಿ ಮುಹಮ್ಮದ್ ಹಫೀಝ್ 100ನೇ ದಿನದ ಸ್ಮರಣಾರ್ಥ ಜು. 5ರಂದು ಕುಂಟಿನಿ ಮದ್ರಸ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.


ಶಿಬಿರದ ಉದ್ಘಾಟನೆಯನ್ನು ಅಲ್ ಬುಖಾರಿ ಜುಮಾ ಮಸ್ಜಿದ್ ಖತೀಬರಾದ ಶರೀಫ್ ಸುಲ್ತಾನಿ ಸಖಾಫಿ ವಹಿಸಿದರು. ಅಧ್ಯಕ್ಷತೆಯನ್ನು ಕೇಂದ್ರ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಸುಪ್ರಿಮ್ ನೆರವೇರಿಸಿದರು.
ಶಿಬಿರದಲ್ಲಿ ಹಲವಾರು ದಾನಿಗಳು ರಕ್ತದಾನ ಮಾಡಿದರು. ಒಟ್ಟು 53 ಯುನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ವೇದಿಕೆಯಲ್ಲಿ ಅಲ್ಬುಖಾರಿ ಜುಮಾ ಮಸ್ಜಿದ್ ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ರವೂಫ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸನಾ, ಮಾಜಿ ಕಾರ್ಯದರ್ಶಿಯೂಸುಫ್ ಬಾಬ, ಕೇಂದ್ರ ಮಸೀದಿ ಕಾರ್ಯದರ್ಶಿ ಆರಿಸ್ ಏ ಟು ಝೆಡ್, ಎಂಗ್ಮೆನ್ಸ್ ಅಧ್ಯಕ್ಷ ಶಾಕಿರ್, ಮುಹಿಯುದ್ದೀನ್ ಸೆಕೆಂಡರಿ ಮದ್ರಸ ಕುಂಟಿನಿ ಇದರ ಸದರ್ ಉಸ್ತಾದರಾದ ಫಾರೂಕ್ ಸಅದಿ, ಮುಅಲ್ಲಿಮರುಗಳಾದ ಇಬ್ರಾಹಿಂ ಅಲ್ ಫುರ್ಕಾಣಿ, ನೌಷದ್ ಸಅದಿ ದಿಡುಪೆ ಎನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಡಾಕ್ಟರ್ ಸಿದ್ದಾರ್ಥ್ ಉಪಸ್ಥಿತರಿದ್ದರು. ಕಾರ್ಯಕ್ರಮ ಆಸಿರ್ ಕುಂಟಿನಿ ನಿರೂಪಿಸಿ ವಂದಿಸಿದರು.














