ಕಣಿಯೂರು : ಕಣಿಯೂರು ನಿವಾಸಿ ಯಕ್ಷಗಾನ ಅರ್ಥದಾರಿ, ಕಾಷ್ಟಶಿಲ್ಪಿ ಚಂದ್ರಯ್ಯ ಆಚಾರ್ಯ ಕಣಿಯೂರು ಜು.5ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಇವರು ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಆದೂರುಪೇರಾಲು ಇದರ ಸಕ್ರೀಯ ಸದಸ್ಯರಾಗಿದ್ದು, ಉತ್ತಮ ವೇಷಧಾರಿಯಾಗಿ, ಅರ್ಥದಾರಿಯಾಗಿ ಯಕ್ಷಗಾನಕ್ಕೆ ತನ್ನದೇ ಆದ ಚಾಪು ಮೂಡಿಸಿದ್ದಾರೆ. ಯಕ್ಷಗಾನ ಬಯಲಾಟಗಳಲ್ಲಿ ಬಹುತೇಕ ಸೌಮ್ಯ ಪಾತ್ರಗಳನ್ನೆ ನೆಚ್ಚಿಕೊಂಡಿದ್ದರೂ ಪುಂಡು ವೇಷಗಳನ್ನು ಕೂಡ ನಿರ್ವಹಿಸುತ್ತಿದ್ದರು.














