ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಜು.11ರಂದು ಮೆಲುಕು 2006 ಎಸ್.ಎಸ್.ಎಲ್.ಸಿ ‘ಎ ‘ ವಿಭಾಗದ ವಿಧ್ಯಾರ್ಥಿಗಳ ತಂಡದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸುಮಾರು 25 ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿಯಾದ ವಿದ್ಯಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಳೇ ವಿದ್ಯಾರ್ಥಿಗಳಾದ ವಿದ್ಯಾಶ್ರೀ , ಕೃಷ್ಣ ಕುಮಾರ ಐತಾಳ, ಕಾರ್ತಿಕ್ ಭಟ್, ಇಸ್ಮಾಯಿಲ್ ಫಾರುಕ್ , ಗೌರವ್ , ಸಂತೋಷ್ ಕುಮಾರ್ , ಎಲ್ಲ ಹಳೆ ವಿದ್ಯಾರ್ಥಿಗಳ ಪರವಾಗಿ ಭಾಗವಹಿಸಿದರು. ಕಾರ್ಯಕ್ರಮವನ್ನು ಅಧ್ಯಾಪಕ ರವೀಶ್ ನಿರೂಪಿಸಿದರು ಮತ್ತು ಚಂದ್ರಶೇಖರ ಭಟ್ ಧನ್ಯವಾದವಿತ್ತರು..















