August 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯಾವುದೇ ನೋಟೀಸು ನೀಡದೆ, ಕಾರಣವಿಲ್ಲದೆ ಏಕಾಏಕಿ ಗೃಹರಕ್ಷಕದಳದ ಘಟಕಾಧಿಕಾರಿಯನ್ನು ಬದಲಾವಣೆ ಮಾಡಿರುವುದು ಯಾವ ನ್ಯಾಯ: ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ಕೊಡಿ : ಜಯಾನಂದ ಲಾಯಿಲ

ಬೆಳ್ತಂಗಡಿ: ಯಾವುದೇ ಮಾಹಿತಿ ನೀಡದೆ, ನೋಟೀಸು ನೀಡದೆ, ಯಾವುದೇ ಕಾರಣವಿಲ್ಲದೆ ಏಕಾಏಕಿ ಬೆಳ್ತಂಗಡಿ ತಾಲೂಕು ಗೃಹರಕ್ಷಕದಳದ ಘಟಕಾಧಿಕಾರಿಯನ್ನು ಬದಲಾವಣೆ ಮಾಡಿ ಬೇರೆಯವರನ್ನು ನೇಮಿಸಿರುವುದು ಸರಿಯಲ್ಲ, ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ ಆದ್ದರಿಂದ ನಮ್ಮ ಘಟಕಕ್ಕೆ ಭೇಟಿ ನೀಡಿ, ನಮ್ಮ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ಸತತ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ಒದಗಿಸಬೇಕು ಎಂದು ಜಯಾನಂದ ಲಾಯಿಲ ಅವರು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಿಗೆ ಮನವಿ ಸಲ್ಲಿಸಿದ್ದಾರೆ.

1989ರಿಂದ ನಾನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತಾ ಘಟಕವನ್ನು ಮುನ್ನಡೆಸುತ್ತಾ ಬರುತ್ತಿದ್ದೇನೆ. ಜಿಲ್ಲಾ ಕಚೇರಿಯ ಎಲ್ಲಾ ಆದೇಶಗಳನ್ನು ಚಾಚುತಪ್ಪದೇ ಪಾಲಿಸುತ್ತಾ ಬಂದಿದ್ದೇನೆ. ತಾಲೂಕು, ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯಗಳಲ್ಲಿ ನಡೆದ ಚುನಾವಣಾ ಕರ್ತವ್ಯಕ್ಕೆ ಜಿಲ್ಲಾ ಕಚೇರಿಯ ಆದೇಶದಂತೆ ಸಿಬಂದಿಗಳನ್ನು ನಿಯೋಜಿಸುತ್ತಾ ಬಂದಿರುವ ನನ್ನನ್ನು ಯಾವುದೇ ಕಾರಣ ನೀಡದೆ, ನೋಟೀಸು ನೀಡದೆ, ನಮ್ಮ ಘಟಕದ ಯಾವ ಸಿಬ್ಬಂದಿಗಳಿಗೂ ಗೊತ್ತಿಲ್ಲದೆ, ಇಲ್ಲಿಯವರೆಗೆ ಯಾವುದೇ ಚುನಾವಣಾ ಕರ್ತವ್ಯಕ್ಕೆ ಅಥವಾ ಬಂದೋಬಸ್ತ್ ಕರ್ತವ್ಯಕ್ಕೆ ಬಾರದ ಓರ್ವ ಸಿಬಂದಿಗೆ ತಾವುಗಳು ಪ್ರಭಾರ ಘಟಕಾಧಿಕಾರಿಯನ್ನಾಗಿ ನೇಮಿಸಿರುವುದು ಯಾವ ನ್ಯಾಯ ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಅವರಿಗಿಂತ ನಮ್ಮ ಘಟಕದಲ್ಲಿ ಬಹಳಷ್ಟು ಸಿನಿಯರ್ ಅಫೀಸರ‍್ಸ್ ತರಬೇತಿ ಆದ ಸಿಬ್ಬಂದಿಗಳು ಇದ್ದಾರೆ. ಘಟಕ್ಕೆ ಬಾರದೆ ಯಾವ ಆಧಾರದಲ್ಲಿ ಅವರನ್ನು ಆಯ್ಕೆ ಮಾಡಿದ್ದೀರಿ ಎಂಬುದರ ಬಗ್ಗೆ ನನಗೆ ಸ್ವಷ್ಟವಾದ ಮಾಹಿತಿಯನ್ನು ನೀಡುವಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಅಲ್ಲದೆ ಆಸಕ್ತಿ ಇದ್ದವರು 7 ದಿವಸದ ಒಳಗೆ ಅರ್ಜಿ ಹಾಕಲು ಅವಕಾಶ ನೀಡಿ ಆದೇಶ ಮಾಡಿ, ತಾವು ೭ ದಿವಸಗಳ ಮುಂಚಿತವಾಗಿ ಅವರೊಬ್ಬರಿಂದ ಅರ್ಜಿಯನ್ನು ತರಿಸಿ ಅವರಿಗೆ ಆದೇಶವನ್ನು ಮಾಡಿದ್ದೀರಿ ಇದು ಕಾನೂನು ಬಾಹಿರವಲ್ಲವೇ, ಜು.7ರಂದು ವಾರದ ಕವಾಯಿತಿಗೆ ಬಂದು ಅವರ ಬ್ಯಾಗ್‌ನಿಂದ ಆದೇಶವನ್ನು ಭೋದಕರು ತೆಗೆದುಕೊಂಡು ನನಗೆ ಹೇಳುತ್ತಾರೆ ಅದು ಯಾವ ನ್ಯಾಯ, ನಮ್ಮ ಘಟಕದ 25 ಮಂದಿ ಸಿಬಂದಿಗಳು ಬದಲಾವಣೆ ಮಾಡದಂತೆ ಮನವಿ ನೀಡಿದ್ದರೂ, ಅದರನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ, ಆದ್ದರಿಂದ ಮತ್ತೊಮ್ಮೆ ಇದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ಜಯಾನಂದ ಲಾಯಿಲ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Related posts

ಆ.5 ರಂದು ಮಂಗಳೂರು ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಹೋರಾಟಕ್ಕೆ ಭಾರತೀಯ ಮಜ್ದೂರು ಸಂಘ ಬಾಹ್ಯ ಬೆಂಬಲ

Suddi Udaya

ಕುವೆಟ್ಟು: ಕೇದಳಿಕೆ ನಿವಾಸಿ ಬಾಬು ನಾಯ್ಕ್ ನಿಧನ

Suddi Udaya

ಧರ್ಮಸ್ಥಳ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಖ್ಯಾತ ವಕೀಲ ದೊರೆರಾಜು

Suddi Udaya

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ-2026ರ ಸಮಾರೋಪ

Suddi Udaya

ಆದಿದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ:ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಹರಿದಾಸ್ ಡೋಗ್ರಾರವರು ಮಂಗಳೂರು ವಿಭಾಗದಿಂದ ಆಯ್ಕೆ

Suddi Udaya
error: Content is protected !!