July 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗೃಹಜ್ಯೋತಿ : ಮೆಸ್ಕಾಂ ಶಾಖಾ ಕಚೇರಿ ಹಾಗೂ ಉಪವಿಭಾಗದಲ್ಲೂ ದಾಖಲೀಕರಣಕ್ಕೆ ವ್ಯವಸ್ಥೆ

ಬೆಳ್ತಂಗಡಿ: ಗೃಹ ಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಿ ಸಾಫ್ಟ್ವೇರ್‌ನಲ್ಲಿ ದಾಖಲಿಸಲು ಈಗಾಲೇ ಸರಕಾರ ಆದೇಶ ಮಾಡಿದೆ.


ಮೀಟರ್ ರೀಡರ್ ಮಧ್ಯಾಹ್ನ ನಂತರ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಫಲಾನುಭವಿಗಳ ಮನೆ, ಮನೆಗೆ ತೆರಳಿ ಸರ್ವೆ ಮಾಡಲು ಪವರ್‌ಮ್ಯಾನ್‌ಗಳಿಗೆ ಮಳೆಗಾಲದ ಕೆಲಸದ ಒತ್ತಡ ಇರುವುದರಿಂದ ಸರ್ವೇಯನ್ನು ನಿಗದಿತ ದಿನಾಂಕದ ಒಳಗೆ ಪೂರ್ಣ ಗೊಳಿಸಬೇಕಾಗಿರುವುದರಿಂದ, ಸಾಧ್ಯ ಇದ್ದವರು ಮೆಸ್ಕಾಂ ಶಾಖಾ ಕಚೇರಿ ಅಥವಾ ಉಪವಿಭಾಗ ಕಚೇರಿಗಳಲ್ಲಿ ದಾಖಲೆ ಇಟ್ಟುಕೊಂಡು ಬಂದಲ್ಲಿ ಕಚೇರಿಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಸಾಫ್ಟ್ವೇರ್‌ನಲ್ಲಿ ಎಂಟ್ರಿ ಮಾಡಲಾಗುವುದು ಎಂದು ಬೆಳ್ತಂಗಡಿ ಉಪವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಈ ಸರ್ವೇಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಹಕಾರ ನೀಡಿದಲ್ಲಿ, ಪಂಚಾಯತ್ ವ್ಯಾಪ್ತಿಯಲ್ಲಿ ಕ್ಯಾಂಪ್ ಮಾಡಿ, ಬೇಕಾಗಿರುವ ಹೆಚ್ಚುವರಿ ಮಾಹಿತಿಯನ್ನು ಸಾಫ್ಟ್ವೇರ್‌ಗೆ ಎಂಟ್ರಿ ಮಾಡಲಾಗುವುದು. ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿ, ದಿನ ಹಾಗೂ ಸ್ಥಳ ತಿಳಿಸಿದರೆ, ನಮ್ಮ ಸಿಬ್ಬಂದಿಗಳು ಅಲ್ಲಿಯೇ ಬಂದು ಮಾಹಿತಿಯನ್ನು ಸಂಗ್ರಹಿಸುತ್ತಾರೆ ಎಂದು ತಿಳಿಸಿದ್ದಾರೆ.

ಬೇಕಾಗಿರುವ ದಾಖಲೆಗಳು ೧) ಗೃಹ ಜ್ಯೋತಿ ಅರ್ಜಿ ಯಾರ ಹೆಸರಿನಲ್ಲಿ ನೊಂದಣಿ ಮಾಡಿದ್ದೀರಿ, ಅವರ ಆಧಾರ್ ಕಾರ್ಡ್, ೨) ಗೃಹ ಜ್ಯೋತಿ ಅರ್ಜಿ ನೋಂದಾವನೆ ಮಾಡಿದಾಗ ನೀಡಿರುವ ಮೊಬೈಲ್ ಸಂಖ್ಯೆಯ ಮೊಬೈಲ್-ಅದೇ ನಂಬರಿಗೆ ಒಟಿಪಿ ಬರುತ್ತೆ ೩) ಅರ್ಜಿ ನೊಂದಣಿದಾರ ಬಿಪಿಎಲ್ ಹೊಂದಿದ್ರೆ, ಕಾರ್ಡ್ ಪ್ರತಿ. ಎಪಿಎಲ್ ಹೊಂದಿದ್ರೆ, ಪ್ರತಿ ಬೇಡ ೪) ಅರ್ಜಿ ನೋಂದಣಿದಾರ ಇನ್‌ಕಮ್ ಟೆಕ್ಸ್ ಪಾವತಿದಾರರು ಅಗಿದಲ್ಲಿ, ಪಾನ್ ಕಾರ್ಡ್ ಪ್ರತಿ, ಪಾವತಿ ದಾರರು ಅಲ್ಲದಿದ್ರೆ ಪ್ರತಿ ಬೇಡ.
೫) ಫಲಾನುಭವಿಯ ವರ್ಗ- ಪ.ಜಾತಿ, ಪಂಗಡ, ಒಬಿಸಿ, ಅಲ್ಪಸಂಖ್ಯಾತ, ಇತರ ತಿಳಿಸಿದಲ್ಲಿ ದಾಖಲಿಸಲಾಗುವುದು. ಆದ್ರೆ ಜಾತಿ ದಾಖಲಾತಿ ಕಡ್ಡಾಯ ಇಲ್ಲ. ೬) ಅರ್ಜಿ ನೋಂದಣಿದಾರರು ಕರ್ನಾಟಕದ ಮತದಾರರು ಅಗಿದಲ್ಲಿ, ವೋಟರ್ ಐಡಿ, ೭) ಅರ್ಜಿ ನೋಂದಣಿದಾರ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ ಒಂದು,
೮) ಅರ್ಜಿ ನೋಂದಣಿದಾರರು ಬಾಡಿಗೆದಾರರು ಅಗಿದಲ್ಲಿ, ಬಾಡಿಗೆ ಕರಾರು ಪತ್ರ- ಒಂದು ವೇಳೆ ಬಾಡಿಗೆ ಕರಾರು ಪತ್ರ ಮಾಡಿಸಿಲ್ಲವಾದ್ರೆ, ನಾವೇ ಕರಾರು ಪತ್ರ ಕೊಡುತೇವೆ. ಮಾಲೀಕರ ಹಾಗೂ ಬಾಡಿಗೆದಾರರ ಸಹಿ ಮಾಡಿ ನೀಡಬೇಕು, ೯) ಅರ್ಜಿ ನೋಂದಣಿದಾರರು ಮರಣ ಹೊಂದಿದಲ್ಲಿ ಅಥವಾ ಅರ್ಜಿ ನೋಂದಾಹಿಸಿದ ಬಾಡಿಗೆದಾರರು ಮನೆ ಬಿಟ್ಟು ಬೇರೆ ಬಾಡಿಗೆದಾರರು ಪ್ರಸ್ತುತ ವಾಸಇದ್ದಲ್ಲಿ, ಪ್ರಸ್ತುತ ವಾಸ ಇರುವ ಯಾರಾದರೊಬ್ಬರ ಹೆಸರಿಗೆ ಅರ್ಜಿ ನೊಂದಾಯಿಸಿ, ಅವರ ಈ ಮೇಲೆ ತಿಳಿಸಿದ ಮಾಹಿತಿಯನ್ನು ಸಾಫ್ಟ್ವೇರ್‌ನಲ್ಲಿ ದಾಖಲು ಮಾಡಲಾಗುವುದು. ೧೦) ಅರ್ಜಿ ನೋಂದಣಿದಾರರ ವೃತ್ತಿ ವಿವರ ತಿಳಿಸುವುದು ೧೧) ಒಂದು ವೇಳೆ ಅರ್ಜಿ ನೋಂದಣಿದಾರರು ಈ ಮೇಲೆ ತಿಳಿಸಿದ ಮಾಹಿತಿಯನ್ನು ನೀಡಲು ಇಚ್ಚಿಸದೇ ಇದ್ದಲ್ಲಿ, ಗೃಹಜ್ಯೋತಿ ವೆರಿಫಿಕೇಶನ್ ಫಾರಂನ ಭಾಗ-೨ ರಲ್ಲಿ ಗೃಹ ಜ್ಯೋತಿ ಸೌಲಭ್ಯವನ್ನು ರದ್ದು ಪಡಿಸಲು ಅಭ್ಯಂತರ ಇಲ್ಲ ಎಂಬುದನ್ನು ದೃಢೀಕರಿಸಿ, ಸಹಿ ಮಾಡಿ ನೀಡಬೇಕು. ೧೨) ಗೃಹಜ್ಯೋತಿ ವಿವರ ದಾಖಲಿಸಿದ ಫಾರಂನಲ್ಲಿ ನೋಂದಣಿದಾರರು ಸಹಿ ಮಾಡಬೇಕು.

Related posts

ನಾಳೆ(ಜೂ.13): ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ ಉಜಿರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಯಶೋ-ವಿಜಯ ಬದುಕು-ನೆನಪು-ಸ್ಮರಣೆ, ಹಾಗೂ ದಿ. ಕಾಶಿ ಶೆಟ್ಟಿಯವರ ಸ್ಮರಣಾರ್ಥ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ

Suddi Udaya

ಕನ್ಯಾಡಿ ಶಾಲೆಗೆ ಖಾಯಂ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜಾರಿಗೆ ಮನವಿ

Suddi Udaya

ಎನ್.ಎಸ್.ಗೋಖಲೆ ಸಂಸ್ಮರಣಾ ವಿದ್ಯಾನಿಧಿ ವಿತರಣೆ

Suddi Udaya

ಹತ್ಯಡ್ಕ ಸಹಕಾರಿ ಸಂಘದ ಚುನಾವಣೆ :ಸಹಕಾರ ಭಾರತೀಯ ಅಭ್ಯರ್ಥಿಗಳ ‘ಮಹಾಭಿಯಾನ’ ಪ್ರಚಾರಕ್ಕೆ ಅರುಣ್ ಕುಮಾರ್ ಪುತ್ತಿಲರಿಂದ ಚಾಲನೆ

Suddi Udaya

ಉಜಿರೆ ರುಡ್‌ಸೆಟ್‌ನ 2022-23 ರ ಸಾಲಿನ ವಾರ್ಷಿಕ ವರದಿ ಬಿಡುಗಡೆ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಕಂಠ ಶಸ್ತ್ರಚಿಕಿತ್ಸೆ ಯಶಸ್ವಿ

Suddi Udaya
error: Content is protected !!