ಬೆಳ್ತಂಗಡಿ: ತುಳುನಾಡಿನ ಸಾಂಸ್ಕ್ರತಿಕ ಕಲಾಪ್ರಕಾರಗಳಾದ ಮನ್ಸ ಸಮುದಾಯದ ಕರ್ಂಗೋಲ್ ಮತ್ತು ಮುಗೇರ ಸಮುದಾಯದ ಕಂಗೀಲು ಕುರಿತಂತೆ ಡಾಕ್ಯುಮೆಂಟರಿ ಪ್ರದರ್ಶನ , ಮಂಗಳೂರು, ನಂತೂರಿನ ಸಂದೇಶ ಫೌಂಡೇಶನ್ ನಲ್ಲಿ ಜು.19 ರಂದು, ಬೆಳಿಗ್ಗೆ 10ರಿಂದ ನಡೆಯಲಿದೆ.
ಮಾಯಿಲು ಫಿಲ್ಮ್ಸ್ ಮತ್ತು ಕಡಲ್ ಸ್ಡುಡಿಯೋಸ್ ಅರ್ಪಿಸುವ ಡಾಕ್ಯುಮೆಂಟರಿಯನ್ನು ಜಯಂತ್ ನಿಟ್ಟಡೆ ಮತ್ತು ಸಾಗರ್ ಬನ್ನಂಜೆ ನಿರ್ದೇಶನ ಮಾಡಿರುತ್ತಾರೆ. ಹಾಗೂ ಬೆಳಿಗ್ಗೆ 9-30 ಕುದ್ಕ ಬಚ್ಚಿರೆ ತುಳು ಸಣ್ಣ ಬರೆಯುವ ಸ್ಪರ್ದೆ, ವಿಜೇತರಿಗೆ ಬಹುಮಾನ ವಿತರಣೆ ಮತ್ತು ಪುಸ್ತಕ ಬಿಡುಗಡೆಯಾಗಲಿದೆ.
















